ಕುಂದಾಪುರ : ಸಾವಿನಲ್ಲೂ ಒಂದಾದ್ರು ಅಣ್ಣ ತಂಗಿ : ಕರಾವಳಿಯಲ್ಲೊಂದು ಅಪರೂಪದ ಘಟನೆ

ಕುಂದಾಪುರ : ಅಣ್ಣ ತಂಗಿ ಇಬ್ಬರೂ ಪ್ರತ್ಯೇಕವಾಗಿಯೇ ವಾಸವಾಗಿದ್ದರು. ಆದ್ರೆ ಅಣ್ಣ ಸತ್ತು ಐದು ಗಂಟೆಯ ಅವಧಿಯಲ್ಲಿ ತಂಗಿಯೂ ಸಾವನ್ನಪ್ಪಿದ್ದಾರೆ. ಈ ಮೂಲಕ ಅಣ್ಣ ತಂಗಿ ಸಾವಿನಲ್ಲಿ ಒಂದಾಗಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಫುರ ತಾಲೂಕಿನ ಬೆಳ್ವೆ ಸಮೀಪದಲ್ಲಿರುವ ಹೆದ್ದಾರಿ ಜೆಡ್ಡು ನಿವಾಸಿ ಸುಬ್ಬಣ್ಣ ನಾಯ್ಕ (65 ವರ್ಷ) ಹಾಗೂ ಗಿರಿಜಾ (60ವರ್ಷ) ಎಂಬವರೇ ಮೃತಪಟ್ಟವರು. ತಂಗಿ ಗಿರಿಜಾ ಅವರು ಮಧ್ಯಾಹ್ನ ೨ ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಸುಬ್ಬಣ್ಣ ಆಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಹಾಲಾಡಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಸಂಜೆ 7 ಗಂಟೆಯ ಸುಮಾರಿ ಅಣ್ಣ ಕೂಡ ಸಾವನ್ನಪ್ಪಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರು ಕೂಡ ಉತ್ತಮ ಬಾಂಧವ್ಯವನ್ನು ಹೊಂದಿದ್ದರು.

Comments are closed.