ನಿತ್ಯಭವಿಷ್ಯ :30-08-2020

0

ಮೇಷರಾಶಿ
ತಪ್ಪುಗಳು ಘಟಿಸದಂತೆ ಅತೀ ಎಚ್ಚರ ವಹಿಸಿ ಮುನ್ನಡೆಯುವುದು ಅತೀ ಅಗತ್ಯ. ಉದ್ಯೋಗದಲ್ಲಿ ಕಿರಿ-ಕಿರಿ, ವೃಥಾ ಧನವ್ಯಯ, ಅಭಿವೃದ್ಧಿ ಕುಂಠಿತ, ಅನಾರೋಗ್ಯ, ಮನಃ ಕ್ಲೇಷ, ದಾಯಾದಿಗಳ ಕಲಹ, ಕೋರ್ಟ್ ಕೆಲಸಗಳಲ್ಲಿ ಓಡಾಟ, ಅಲ್ಪ ಪ್ರಗತಿ, ಅಧಿಕ ತಿರುಗಾಟ, ಸ್ಥಳ ಬದಲಾವಣೆ.

ವೃಷಭರಾಶಿ
ಆರೋಗ್ಯದ ಏರುಪೇರು, ಮಾನಸಿಕ ಕಿರಿಕಿರಿ, ಮಿತ್ರರ ಸಹಕಾರವು ನಿಮ್ಮ ಪಾಲಿಗೆ ಒದಗಿ ಬಂದು ಸಮಾಧಾನವಾಗಲಿದೆ, ಕಾರ್ಯರಂಗದಲ್ಲಿ ಸ್ವಲ್ಪ ಸಮಾಧಾನದ ವಾತಾವರಣ, ಕೌಟುಂಬಿಕ ಸಮಸ್ಯೆಗಳಿಂದ ಚಿಂತೆ, ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಅಲ್ಪ ಪ್ರಗತಿ, ವೃಥಾ ತಿರುಗಾಟ, ಯತ್ನ ಕಾರ್ಯದಲ್ಲಿ ವಿಘ್ನ, ಚೋರಾಗ್ನಿ ಭೀತಿ, ಸ್ಥಳ ಬದಲಾವಣೆ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಸಲ್ಲದ ಅಪವಾದ.

ಮಿಥುನರಾಶಿ
ಸಾಮಾನ್ಯ ನೆಮ್ಮದಿಗೆ ದಕ್ಕೆ, ನಾನಾ ರೀತಿಯ ಸಂಪಾದನೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ. ಪತ್ನಿಯ ಆರೋಗ್ಯ ಹಾಗೂ ಪುತ್ರನ ಆರೋಗ್ಯವು ಸ್ವಲ್ಪ ಕೆಟ್ಟಿತು. ಮಾತಿನಲ್ಲಿ ನಡೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿರಿ.ಧೈರ್ಯದಿಂದ ಕಾರ್ಯ ಮಾಡುವಿರಿ, ಗಣ್ಯ ವ್ಯಕ್ತಿಗಳಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ, ಅಧಿಕ ಕೋಪ.

ಕಟಕರಾಶಿ
ಹೊಸ ಉದ್ಯಮವನ್ನು ಕೈಗೊಳ್ಳಲು ಸಕಾಲ, ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಿ, ಯಾರನ್ನು ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಭಯ, ಬಂಧು ಮಿತ್ರರ ಸಮಾಗಮ, ದ್ರವ್ಯ ಲಾಭ, ಸ್ತ್ರೀಯರಿಗೆ ಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು, ಕಾರ್ಯದಲ್ಲಿ ವಿಘ್ನ, ಅನಗತ್ಯ ಸುತ್ತಾಟ, ಋಣಭಾದೆ.

ಸಿಂಹರಾಶಿ
ವಾಹನ ರಿಪೇರಿ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ಮಾರಾಟ, ಪತಿಯ ಆರೋಗ್ಯ ಹಾಗೂ ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದಿರಿ. ಸಮಯ ಉತ್ತಮವಾಗಿದ್ದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ, ವೃತಾ ಚಿಂತೆಯಿಂದ ದೂರವಿರಿ, ತಾಯಿಗೆ ತೊಂದರೆ, ದುಷ್ಟ ಬುದ್ಧಿ, ದಂಡ ಕಟ್ಟುವ ಸಾಧ್ಯತೆ, ಆಲಸ್ಯ ಮನೋಭಾವ, ರೋಗಬಾಧೆ.

ಕನ್ಯಾರಾಶಿ
ಕಂಕಣಬಲಕ್ಕೆ ಹೆಚ್ಚಿನ ಪ್ರಯತ್ನ ಬಲ ಅಗತ್ಯವಿದೆ, ಬೇಕಾಬಿಟ್ಟಿ ಕೆಲಸ ಮಾಡಿದರೆ ಫ‌ಲ ಸಿಗದು. ನಿಮ್ಮ ದುಡುಕುತನ ಹಾಗೂ ಸಿಡುಕುತನ ನಿಮಗೆ ಮುಳುವಾದೀತು. ಪಾಪಬುದ್ಧಿ, ದುಃಖದಾಯಕ ಪ್ರಸಂಗ, ಮಾನಸಿಕ ಅಶಾಂತಿ, ಅತಿಯಾದ ನಿದ್ರೆ, ವಿಪರೀತ ವ್ಯಸನ, ಉದ್ಯೋಗದಲ್ಲಿ ಬಡ್ತಿ, ದಾನ ಧರ್ಮದಲ್ಲಿ ಆಸಕ್ತಿ, ತೀರ್ಥಕ್ಷೇತ್ರ ದರ್ಶನ.

ತುಲಾರಾಶಿ
ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಬಂದು ಸಮಾಧಾನವಾದೀತು. ಕೌಟುಂಬಿಕವಾಗಿ ಹಲವು ಸಮಸ್ಯೆ ಚಿಂತೆ ಕಾಡುವುದು. ಅದಕ್ಕೆ ಸಮಾಧಾನದಿಂದ ಇರುವುದು ಉತ್ತಮ ಉಪಾಯ. ಸಹಾಯ ಮಾಡುವ ಮನಸ್ಸು, ವಾಗ್ವಾದಗಳಿಂದ ದೂರವಿರಿ, ವಿದ್ಯೆಯಲ್ಲಿ ಅಭಿವೃದ್ಧಿ, ಚಂಚಲ ಮನಸ್ಸು, ಕುಟುಂಬದಲ್ಲಿ ಕಲಹ, ಮಿತ್ರರಿಂದ ವಂಚನೆ, ಆತ್ಮೀಯರಲ್ಲಿ ದ್ವೇಷ ಹೆಚ್ಚಾಗುವುದು.

ವೃಶ್ಚಿಕರಾಶಿ
ಹಣಕಾಸು ನಷ್ಟ, ಅಧಿಕ ಖರ್ಚು, ಸ್ಥಳ ಬದಲಾವಣೆ, ಅದೃಷ್ಟ ಕೈ ತಪ್ಪುವುದು, ಮಾನಸಿಕ ವ್ಯಥೆ, ವಾಹನ ಚಾಲನೆಯಲ್ಲಿ ಎಚ್ಚರ, ಪುತ್ರಿಗೆ ಉತ್ತಮ ಸಂಬಂಧ ಕೂಡಿ ಬಂದ ಸಮಾಧಾನ ನಿಮಗಿರುತ್ತದೆ. ಆದರೂ ಆರೋಗ್ಯವು ಉತ್ತಮವಿರದು. ಆದಷ್ಟು ಜಾಗ್ರತೆ ಮಾಡಿರಿ. ಮನೆಯಲ್ಲಿ ಸ್ವಲ್ಪ ಕಿರಿಕಿರಿಯ ವಾತಾವರಣ ವಿರುವುದು, ಅಮೂಲ್ಯ ವಸ್ತುಗಳನ್ನು ಕಳೆಯುವಿರಿ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ.

ಧನಸ್ಸುರಾಶಿ
ನೂತನ ಪ್ರಯತ್ನಗಳಲ್ಲಿ ಯಶಸ್ಸು, ಸಾಲ ಮಾಡುವ ಪರಿಸ್ಥಿತಿ, ನಿಮಗೆ ಗೊಂದಲವು ಕಾಡಲಿದೆ. ದ್ವಿಮನಸ್ಸನ್ನು ನಿಯಂತ್ರಿಸಿರಿ. ಸ್ವಲ್ಪಕಾಲ ಕಷ್ಟವೆನಿಸಬಹುದು. ನಂತರ ನಿಮಗೆ ಸಮಾಧಾನವು ದೊರಕೀತು. ಮನೆಯಲ್ಲಿ ಎಲ್ಲಾ ರೀತಿಯಲ್ಲಿ ಸೌಕರ್ಯಗಳಿರುತ್ತವೆ, ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಪೂಜಾ ಕಾರ್ಯಗಳಲ್ಲಿ ಭಾಗಿ, ತೀರ್ಥಕ್ಷೇತ್ರ ದರ್ಶನ, ಸುಖ ಭೋಜನ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

ಮಕರರಾಶಿ
ಹಳೆಯ ಬಾಕಿ ವಸೂಲಿ, ಅಮೂಲ್ಯ ವಸ್ತುಗಳ ಕಳವು, ಸ್ವಯಂ ಕೃತ್ಯಗಳಿಂದ ನಷ್ಟ, ಆರ್ಥಿಕ ಸಂಕಷ್ಟವು ನಿಮಗೆ ಎದುರಾದೀತು. ಆದರೂ ಉದ್ವಿಗ್ನತೆ, ಕೋಪತಾಪದಿಂದ ಮನಸ್ಸನ್ನು ಹಾಳು ಗೆಡಲು ಬಿಡದಿರಿ. ಆರೋಗ್ಯವು ಸ್ವಲ್ಪ ಏರುಪೇರಾದೀತು. ಮಕ್ಕಳಿಂದ ಸಂತೋಷ, ಸಮಾಧಾನವಿದೆ, ಶತ್ರುಗಳ ಷಡ್ಯಂತ್ರಕ್ಕೆ ಒಳಗಾಗುವಿರಿ, ನೌಕರಿಯಲ್ಲಿ ತೊಂದರೆ, ಮಕ್ಕಳ ಬಗ್ಗೆ ಗಮನವಿರಲಿ.

ಕುಂಭರಾಶಿ
ಕೆಟ್ಟ ಶಬ್ದಗಳಿಂದ ನಿಂದನೆ, ಕೋಪದಿಂದ ಕಲಹ, ವಿದ್ಯಾರ್ಥಿಗಳಿಗೆ ಪ್ರಶಂಸೆ, ಕೋರ್ಟ್ ಕೆಲಸಗಳಲ್ಲಿ ವಿಘ್ನ, ದುಷ್ಟಬುದ್ಧಿ, ಅಪಘಾತ ಸಂಭವ, ತುಂಬಾ ಗಂಭೀರ ಹಾಗೂ ಸ್ವಲ್ಪ ಹಠ ಸ್ವಭಾವದ ನೀವು ಎಲ್ಲವೂ ನೀವು ಎಣಿಸಿದಂತೆ ನಡೆಯಬೇಕೆಂಬುದನ್ನು ಸ್ವಲ್ಪ ಬಿಟ್ಟುಬಿಡಿರಿ. ಅನ್ಯರನ್ನು ಸ್ವಲ್ಪ ಕೆಳಿಸಿಕೊಳ್ಳುವ ಸ್ವಭಾವ ರೂಢಿಸಿಕೊಳ್ಳಿರಿ. ತಾಳ್ಮೆ ಇರಲಿ.

ಮೀನರಾಶಿ
ನಾನಾ ಮೂಲಗಳಿಂದ ಲಾಭ, ವಿದೇಶ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಭೂ ಲಾಭ, ಉದ್ಯೋಗವಕಾಶ, ಉನ್ನತ ಸ್ಥಾನಮಾನ, ಮಹಿಳೆಯರಿಗೆ ಲಾಭ, ಯಾವುದನ್ನು ಅತೀ ಹೆಚ್ಚು ತಲೆಗೆ ಹಚ್ಚಿಕೊಳ್ಳದಿರಿ. ಏನ್ನನ್ನು ಎದುರಿಸಬೇಕೋ ಅದನ್ನು ನಿಶ್ಚಿತರಾಗಿ ಎದುರಿಸಿರಿ. ಹಿತಶತ್ರುಗಳ ಮಾತಿಗೆ ತಲೆಕೆಡಿಸಿಕೊಳ್ಳುವುದು ಬೇಡ. ಧೈರ್ಯದಿಂದ ಮುನ್ನಡೆಯಿರಿ.

Leave A Reply

Your email address will not be published.