ನಿತ್ಯಭವಿಷ್ಯ : 24-06-2020

0

ಮೇಷರಾಶಿ
ದ್ರವ್ಯ ಲಾಭ, ಬಂಧು-ಮಿತ್ರರ ಸಮಾಗಮ, ವ್ಯಾಪಾರ-ಉದ್ಯೋಗದಲ್ಲಿ ಲಾಭ, ಮನಸ್ಸಿನಲ್ಲಿ ಭಯ, ಆತಂಕ. ಆಗಾಗ ಅತಿಥಿಗಳು ಬಂದಾರು. ಆತ್ಮಸ್ಥೆರ್ಯಗಳಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ತೋರಿ ಬರುತ್ತದೆ.ರಾಜಕೀಯದವರಿಗೆ ಮುನ್ನಡೆಯ ಅವಕಾಶಗಳು ತೋರಿ ಬರಲಿವೆ.

ವೃಷಭರಾಶಿ
ಅವಿವಾಹಿತರಿಗೆ ಕಂಕಣಬಲದ ಅವಕಾಶ ಗಳಿರುತ್ತದೆ. ಸ್ಥಳ ಬದಲಾವಣೆ, ಮಂಗಳ ಕಾರ್ಯ ನಡೆಯವುದು, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವ ಸಾಧ್ಯತೆ, ಯಾರನ್ನೂ ಹೆಚ್ಚು ನಂಬಬೇಡಿ. ಸದುಪಯೋಗಿಸಿರಿ.ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಕಂಡು ಬರುತ್ತದೆ.ಹಳೇ ಮಿತ್ರರ ಆಗಮನದಿಂದ ಸಂತಸ.

ಮಿಥುನರಾಶಿ
ಆಗಾಗ ಅಡಚಣೆಗಳು ತೋರಿ ಬಂದು ಕೆಲಸಕಾರ್ಯಗಳಲ್ಲಿ ಮನಸ್ಸಾಗದು. ನಾನಾ ರೀತಿಯ ಸಂಪಾದನೆ, ಉನ್ನತ ಸ್ಥಾನಮಾನ, ಭಾಗ್ಯ ವೃದ್ಧಿ, ಮಾನಸಿಕ ನೆಮ್ಮದಿ, ಆತ್ಮೀಯರಲ್ಲಿ ದ್ವೇಷ, ಆರೋಗ್ಯದಲ್ಲಿ ವ್ಯತ್ಯಾಸ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳೊಡನೆ ಅನಾವಶ್ಯಕ ಭಿನ್ನಾಭಿಪ್ರಾಯ ತಂದೀತು. ಅನಿರೀಕ್ಷಿತವಾಗಿ ಶುಭವಾರ್ತೆ ಕೇಳುವಿರಿ.

ಕಟಕರಾಶಿ
ವಿದ್ಯಾರ್ಥಿಗಳು ಪ್ರಯತ್ನಬಲದಿಂದಲೇ ಮುಂದು ವರಿಯುವುದು ಲೇಸು. ಕುಟುಂಬ ಸೌಖ್ಯ, ಸ್ತ್ರೀಯರಿಗೆ ಶುಭ, ಸುಖ ಭೋಜನ ಪ್ರಾಪ್ತಿ, ವಿವಾಹ ಯೋಗ, ಇಲ್ಲ ಸಲ್ಲದ ಅಪವಾದ. ರಾಜಕೀಯ ರಂಗ ದಲ್ಲಿ ನಿಮ್ಮ ಮಾತೇ ನಡೆಯಲಿದೆ.ಆರ್ಥಿಕ ಸ್ಥಿತಿಯಲ್ಲಿ ಜಾಗ್ರತೆ ವಹಿಸಿರಿ.ಕಾರ್ಮಿಕರಿಗೆ ಪರಿಸ್ಥಿತಿ ಅನುಕೂಲವಾಗಲಿದೆ.

ಸಿಂಹರಾಶಿ
ಸಾಂಸಾರಿಕವಾಗಿ ಮಾನಸಿಕ ನೆಮ್ಮದಿ ಇರದು. ಅನಾವಶ್ಯಕವಾಗಿ ಕೋಪತಾಪಗಳಿಗೆ ಬಲಿಯಾಗುವಿರಿ. ವಿಪರೀತ ಹಣವ್ಯಯ, ಕಾರ್ಯದಲ್ಲಿ ನಿಧಾನ, ದುಃಖದಾಯಕ ಪ್ರಸಂಗ, ಗುಪ್ತ ವಿದ್ಯೆಯಲ್ಲಿ ಆಸಕ್ತಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ ತೋರಿ ಬರಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿಯು ತೋರಿ ಬರುವುದು. ಮುನ್ನಡೆಯಿರಿ.

ಕನ್ಯಾರಾಶಿ
ಹಿರಿಯರಿಗೆ ಮಕ್ಕಳ ಬಗ್ಗೆ ಚಿಂತೆ ತಂದೀತು. ದ್ರವ್ಯ ನಾಶ, ಪರರಿಗೆ ವಂಚಿಸುವ ಸಾಧ್ಯತೆ, ಋಣ ಬಾಧೆ, ಪ್ರಿಯ ಜನರ ಭೇಟಿ, ವಿದ್ಯಾಭ್ಯಾಸದಲ್ಲಿ ಪ್ರಗತಿ. ವ್ಯಾಪಾರ, ವ್ಯವಹಾರಗಳು ತಕ್ಕ ಮಟ್ಟಿಗೆ ನಡೆದರೂ ಆತಂಕ ಕಂಡು ಬರಲಿವೆ. ಯೋಗ್ಯ ವಯಸ್ಕರು ಕಂಕಣಬಲವನ್ನು ಹೊಂದಲಿದ್ದಾರೆ. ದೂರ ಸಂಚಾರದಲ್ಲಿ ಜಾಗ್ರತೆ.

ತುಲಾರಾಶಿ
ವಿದ್ಯಾರಂಗದಲ್ಲಿ ಅಧಿಕಾರಿ ವರ್ಗದವರಿಂದ ಅಭಿವೃದ್ಧಿ ಕಂಡು ಬರಲಿದೆ. ಅಲ್ಪ ಲಾಭ, ಹಣಕಾಸು ನಷ್ಟ, ಕುಟುಂಬದಲ್ಲಿ ಕಲಹ, ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು. ಹಳೇ ಮಿತ್ರರಿಂದ ಘರ್ಷಣೆ ನಡೆದು ಅನಾವಶ್ಯಕವಾಗಿ ಮನಸ್ತಾಪಕ್ಕೆ ಬಲಿಯಾಗುವಿರಿ. ಆಗಾಗ ಸಂಚಾರಗಳು ಒದಗಿ ಬಂದೀತು.

ವೃಶ್ಚಿಕರಾಶಿ
ದೇಹಾರೋಗ್ಯದಲ್ಲಿ ಅಭಿವೃದ್ಧಿ ತೋರಿ ಬರಲಿದೆ. ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಬುದ್ಧಿ ಕ್ಲೇಷ, ಕೆಲಸ ಕಾರ್ಯಗಳಲ್ಲಿ ವಿಘ್ನ, ಮಾನಸಿಕ ನೆಮ್ಮದಿ, ಸ್ವಜನರ ವಿರೋಧ. ಶುಭಮಂಗಲ ಕಾರ್ಯಗಳಿಗಾಗಿ ಧನವ್ಯಯವಾದೀತು. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಒತ್ತಡಗಳು ಕಂಡು ಬಂದಾವು.ಹೆಚ್ಚು ಶ್ರಮ ಪಡಬೇಡಿ.

ಧನುರಾಶಿ
ಉದ್ಯೋಗದಲ್ಲಿ ಅಭಿವೃದ್ಧಿ, ವ್ಯಾಪಾರದಲ್ಲಿ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ತೀರ್ಥಯಾತ್ರೆ ದರ್ಶನ, ದೂರ ಪ್ರಯಾಣ. ವೃತ್ತಿರಂಗದಲ್ಲಿ ಬದಲಾವಣೆಗಳು ಕಂಡು ಬರಲಿವೆ. ನಿಮ್ಮ ಕ್ರಿಯಾಶೀಲತೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ನೀಡಿಯಾರು. ಅನಿರೀಕ್ಷಿತ ಆರೋಗ್ಯದಲ್ಲಿ ಏರುಪೇರಾದೀತು.ಜಾಗ್ರತೆ ಇರಲಿ. ಹೆಚ್ಚು ಚಿಂತೆ ಬೇಡ.

ಮಕರರಾಶಿ
ನಿಮ್ಮ ಕಾರ್ಯಕ್ಷೇತ್ರದಲ್ಲಿ ಬದಲಾವಣೆಗಳು ಕಂಡು ಬಂದು ಹಂತ ಹಂತವಾಗಿ ಅಭಿವೃದ್ಧಿಯಾಗಲಿವೆ. ದಾಂಪತ್ಯದಲ್ಲಿ ಅನ್ಯೋನ್ಯತೆ, ಆಕಸ್ಮಿಕ ಧನ ಲಾಭ, ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ, ವಸ್ತ್ರಾಭರಣ ಖರೀದಿ ಯೋಗ. ಆರ್ಥಿಕವಾಗಿ ಕೂಡಾ ಬರಬೇಕಾದ ಹಣ ಸಂದಾಯವಾದೀತು.ಹಣದ ಬಗ್ಗೆ ಯಾರನ್ನೂ ನಂಬಬಾರದು.

ಕುಂಭರಾಶಿ
ಅನಾವಶ್ಯಕವಾಗಿ ಮನಸ್ತಾಪದಿಂದ ಗೊಂದಲ ಗಳು ಕಂಡು ಬಂದಾವು. ಭೂ ವ್ಯವಹಾರದಲ್ಲಿ ಲಾಭ, ವಾಹನದಿಂದ ಅನುಕೂಲ, ಹಿತ ಶತ್ರುಗಳಿಂದ ತೊಂದರೆ, ಎಲ್ಲಿ ಹೋದರೂ ಅಶಾಂತಿ, ದೇಹಾಲಸ್ಯ, ಚಂಚಲ ಮನಸ್ಸು. ಆರ್ಥಿಕವಾಗಿ ಗೊಂದಲಗಳು ಕಂಡು ಬಂದಾವು.ಪತ್ನಿಯ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಕಾರ್ಮಿಕರಿಗೆ ಉನ್ನತಿ ಇರುವುದು.

ಮೀನರಾಶಿ
ವಿದ್ಯಾರ್ಥಿಗಳಿಗೆ ಪ್ರಶಂಸೆ, ನೌಕರಿಯಲ್ಲಿ ಕಿರಿಕಿರಿ, ಹಣಕಾಸು ನಷ್ಟ, ಅಪವಾದ, ಅವಮಾನ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಋಣ ಬಾಧೆ. ಶ್ರೀದೇವತಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ನೆರವೇರಲಿವೆ. ಆಗಾಗ ಆರ್ಥಿಕ ಅಡಚಣೆಗಳು ಎದುರಾದಾವು.ಉದಾಸೀನತೆಯಿಂದ ಕೆಲಸ ಕಾರ್ಯಗಳು ಹಿನ್ನಡೆ ಕಂಡಾವು.ಬಂಧುಗಳ ಆಗಮನವಿದೆ.

Leave A Reply

Your email address will not be published.