ಸಂಗೀತ ಪ್ರಿಯರ ಕಿವಿಗಿಂಪು ನೀಡುತ್ತಿದೆ ಮಳೆಹಾಡು : 15 ಹಾಡುಗಾರರ ಧ್ವನಿಯಲ್ಲಿ ಮೂಡಿಬಂದಿದೆ ‘ಓ ಮಳೆ ಹನಿಯೇ..!

0

ಹರಿಪ್ರಸಾದ್ ಹರಿತಾಸ್ ನಿರ್ಮಾಣದಲ್ಲಿ, ಯುವ ನಿರ್ದೇಶಕ ಅನೀಶ್ ಪೈ ಬಿ. ನಿರ್ದೇಶನ, ಯುವ ಸಂಗೀತ ನಿರ್ದೇಶಕ ಸಾತ್ವಿಕ್ ಪಡಿಯಾರ್ ಸಂಗೀತ ಹಾಗೂ ರಜಾಕ್ ಪುತ್ತೂರು ಸಾಹಿತ್ಯದಲ್ಲಿ ಓ ಮಳೆ ಹನಿಯೇ…! ಹಾಡು ಅದ್ಬುತವಾಗಿ ಮೂಡಿಬಂದಿದೆ. ಸ್ನ್ಯಾಪ್ಶಾಟ್ ವಿಜ್ವಲ್ ಮತ್ತು ಶೋಲಿನ್ ಸ್ಟುಡಿಯೋಸ್ ಇವರ ಸಂಗೀತ ಮಾಲಿಕತ್ವದ ಕ್ಲಾಸಿಕ್ ಮೀಡಿಯಾ ಯುಟ್ಯೂಬ್ ಚಾನಲ್ ನಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

ಓ ಮಳೆ ಹನಿಯೇ …! ಹಾಡಿಗೆ ಕಿರಣ್ ಉಡುಪಿ ಶೀರ್ಷಿಕೆ ನೀಡಿದ್ರೆ, ರಾಹುಲ್ ವಸಿಷ್ಠ ಹಾಗೂ ಅಂಕಿತ್ ಆಚಾರ್ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾತ್ವಿಕ್ ನೆಲ್ಲಿತೀರ್ಥ, ಅಭಿಷೇಕ್ ಕೋಟ್ಯಾನ್, ಆದೇಶ ಪಳನೀರ್, ಸುಶಾಂತ್ ಅಮೀನ್, ನಿಖಿಲೇಖ್ ಭಟ್ ಮುಂಡಾಜೆ ಅವರ ಸಹಕಾರದಲ್ಲಿ ಹಾಡು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಓ ಮಳೆ ಹನಿಯೇ…! ಹಾಡನ್ನು ಕೇವಲ 2 ದಿನಗಳಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಮಳೆಹಾಡಿಗೆ 15 ಮಂದಿ ಯುವ ಸಂಗೀತಗಾರರು ಧ್ವನಿ ನೀಡಿದ್ದಾರೆ. ನಟ ವಸಿಷ್ಠ ಸಿಂಹ, ನಿರೂಪಕ ಬಡೆಕಿಲ ಪ್ರದೀಪ್, ನಟಿ ಚಂದನ ಅನಂತಕೃಷ್ಣ, ಡಾ ಅಭಿಷೇಕ ರಾವ್, ಅಖಿಲಾ ಪಜಿಮಣ್ಣು, ಅಪೇಕ್ಷ ಪೈ, ಕೀರ್ತನ್ ಹೊಳ್ಳ, ದಿವ್ಯ ರಾಮಚಂದ್ರ, ನಿಶಾನ್ ಎಂ ರೈ, ಅರ್ಪಸ್ ಉಳ್ಳಾಲ್, ಸಾಗರ್ ಚಂಡ್ಗಡ್ಕರ್, ನೀತು ಸುಬ್ರಮಣ್ಯ, ಕೀರ್ತನಾ, ನಿಖಿಲ್ ಹೆಗ್ಡೆ ಮತ್ತು ಸೌಂದರ್ಯ ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡು ಸಂಗೀತರ ಪ್ರಿಯರಿಗೆ ಇಷ್ಟವಾಗುತ್ತೆ.

Leave A Reply

Your email address will not be published.