ISKCON : ಇಸ್ಕಾನ್ ಟೆಂಪಲ್ ಮಾಲೀಕತ್ವ ಬೆಂಗಳೂರಿನ ಕೈತಪ್ಪುತ್ತಾ ? ಸುಪ್ರೀಂ ಕೋರ್ಟ್ ಭಿನ್ನ ತೀರ್ಪು

ಬೆಂಗಳೂರು : ಬೆಂಗಳೂರಿನ ಇಸ್ಕಾನ್ (ISKCON) ಟೆಂಪಲ್ ಮಾಲೀಕತ್ವದ ವಿಚಾರವಾಗಿ ಕಳೆದ 25 ವರ್ಷಗಳಿಂದ ಕಾನೂನು ಸಮರ ನಡೆಯುತ್ತಲೇ ಬಂದಿದೆ. ಇದೀಗ ಸುಪ್ರೀಂ ಕೋರ್ಟ್ ವಿಭಿನ್ನ ತೀರ್ಪು ಪ್ರಕಟಿಸಿದ್ದು, ದೇವಸ್ಥಾನದ ಆಡಳಿತ ಇದೀಗ ಬೆಂಗಳೂರಿನ ಕೈತುಪ್ಪುವ ಸಾಧ್ಯತೆಯಿದೆ.
ಕಳೆದ ಮೇ ತಿಂಗಳಿನಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್ ಓಕಾ ಮತ್ತು ಎಜಿ ಮಸೀಹ್ ಅವರ ನೇತೃತ್ವದ ಸುಪ್ರೀಂ ಪೀಠ ಈ ದೇಗುಲ ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನ ಮತ್ತು ಶೈಕ್ಷಣಿಕ ಸಂಕೀರ್ಣ ಮಾಲೀಕತ್ವದಲ್ಲಿದೆ ಎಂದು ತೀರ್ಪು ನೀಡಿತ್ತು.
2011ರ ಕರ್ನಾಟಕ ಹೈಕೋರ್ಟ್ನ ತೀರ್ಪು ರದ್ದುಗೊಳಿಸಿದ್ದ ನ್ಯಾಯಪೀಠ ಬೆಂಗಳೂರಿನ ಶಾಖೆ ಇಸ್ಕಾನ್ ಟೆಂಪಲ್ನ ಸಂಪೂರ್ಣ ಹಕ್ಕು ಹೊಂದಿದೆ ಹೇಳಿತ್ತು. ಆದರೆ ಬೆಂಗಳೂರಿಗೆ ದೊರಕಿದ ಈ ಗೆಲುವಿಗೆ ಇದೀಗ ಮತ್ತೊಮ್ಮೆ ಸಂಚಕಾರ ಎದುರಾಗಿದೆ.
ಸುಪ್ರೀಂ ಕೋರ್ಟ್ನಿಂದ ಈ ತೀರ್ಪು ಹೊರಬಿದ್ದು ಆರು ತಿಂಗಳು ಕೂಡ ಕಳೆದಿಲ್ಲ. ಅದಾಗಲೇ ಮುಂಬೈ ಶಾಖೆಯು ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಭಿನ್ನ ತೀರ್ಪು ನೀಡಿದೆ. ಇದರಿಂದ ಬೆಂಗಳೂರು ಶಾಖೆಯ ಕೈ ತಪ್ಪುತ್ತಾ ಇಸ್ಕಾನ್ ಟೆಂಪಲ್ ಮಾಲೀಕತ್ವ ಎಂಬ ಅನುಮಾನ ದಟ್ಟವಾಗಿದೆ.
ಇದನ್ನೂ ಓದಿ : ದತ್ತುಪುತ್ರನಿಗೂ ಅನುಕಂಪದ ಆಧಾರದಲ್ಲಿ ಉದ್ಯೋಗ : ಹೈಕೋರ್ಟ್ ಮಹತ್ವದ ಆದೇಶ
ಮುಂಬೈ ಶಾಖೆಯಿಂದ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎ.ಜಿ ಮಸೀಹ್ ಅವರು ವಜಾಗೊಳಿಸಿದ್ದರೆ ನ್ಯಾಯಮೂರ್ತಿ ಜೆ.ಕೆ ಮಹೇಶ್ವರಿ ಈ ಅರ್ಜಿಯನ್ನು ಪುರಸ್ಕರಿಸಿದ್ದು ಮತ್ತೊಮ್ಮೆ ಈ ಪ್ರಕರಣವನ್ನು ನ್ಯಾಯಾಲಯದ ಮುಂದಿಡಲು ಅವಕಾಶ ನೀಡಿದ್ದಾರೆ.
ಮೇ ತಿಂಗಳಿನಲ್ಲಿ ನೀಡಲಾದ ತೀರ್ಪಿನಲ್ಲಿ ಸ್ವಲ್ಪ ದೋಷ ಇರುವ ಸಾಧ್ಯತೆಯಿದ್ದು ಈ ಅರ್ಜಿಯ ಮರುಪರೀಶಿಲನೆ ನಡೆಯಬೇಕು ಎಂದಿದ್ದಾರೆ. ಈ ಭಿನ್ನ ತೀರ್ಪಿನ ಬಳಿಕ ಇದೀಗ ಮತ್ತೊಮ್ಮೆ ಇಸ್ಕಾನ್ ಟೆಂಪಲ್ ವಿವಾದ ಬಗೆಹರಿಸಲು ವಿಸ್ತ್ರತ ಪೀಠ ರಚನೆಗೊಳ್ಳುವ ಸಾಧ್ಯತೆ ಇದೆ.
ಇಸ್ಕಾನ್ ದೇವಾಲಯ ಬೆಂಗಳೂರಿನ ಆಡಳಿತ ಮಂಡಳಿಯ ಪಾಲಾಯ್ತು ಎಂದು ನಿಟ್ಟುಸಿರು ಬಿಡಲಾಗಿತ್ತು. ಸಿಲಿಕಾನ್ ಸಿಟಿಯ ಪ್ರಮುಖ ಟೂರಿಸ್ಟ್ ಸ್ಪಾಟ್ ಇಸ್ಕಾನ್ ಟೆಂಪಲ್ ಮಾಲೀಕತ್ವ ಇದೀಗ ಮತ್ತೆ ತೂಗುಗತ್ತಿಯ ಮೇಲೆ ನಿಂತಿದೆ.
ಇದನ್ನೂ ಓದಿ : ಬಹುಕೋಟಿ ವಂಚಕ ಮಂಗಳೂರಿನ ರೋಶನ್ ಸಲ್ದಾನಾ ಆಸ್ತಿ ಜಪ್ತಿ
ISKCON Bengaluru Ownership Row Supreme Court Delivers Split Verdict



