Chikkamagaluru : ಮದುವೆಗೆ ಒಂದು ದಿನದ ಮುನ್ನ ಹಸೆಮಣೆ ಏರಬೇಕಿದ್ದ ವಧು ಹೃದಯಾಘಾತದಿಂದ ನಿಧನ
Chikkamagaluru: ಮದುವೆ ಎಲ್ಲರ ಜೀವನದಲ್ಲಿಯೂ ಬರುವ ಮಹತ್ವದ ಘಟ್ಟ. ಭವಿಷ್ಯದ ಬದುಕಿನ ಬಗ್ಗೆ ನೂರಾರು ಕನಸುಗಳನ್ನು ಹೆಣೆದುಕೊಳ್ಳುವ ಸಮಯ. ಇಂತಹದ್ದೇ ಸಂಭ್ರಮದಲ್ಲಿ ಯುವತಿಯೊಬ್ಬರು ಹಸೆಮಣೆ ಏರುವ ಮುನ್ನವೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಚಿಕ್ಕಮಗಳೂರು(Chikkamagaluru) ಜಿಲ್ಲೆ ಗುರುವಾರ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಯುವತಿಯನ್ನು 24 ವರ್ಷದ ಶೃತಿ ಎಂದು ಗುರುತಿಸಲಾಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಾಳೆ (ಅ.31ರಂದು) ಮೃತ ಶೃತಿ ತರಿಕೆರೆಯ ದಿಲೀಪ್ ಎಂಬವರ ಜೊತೆ ಹಸೆಮಣೆ ಏರಬೇಕಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಮದುವೆಯ ಸಂಭ್ರಮದಲ್ಲಿ ತಯಾರಿ ನಡೆಸುತ್ತಿದ್ದ ವೇಳೆಯಲ್ಲಿ ಶೃತಿಗೆ ಇದ್ದಕ್ಕಿದ್ದಂತೆ ಬಿಪಿ ಕುಸಿತವಾಗಿದೆ. ಅದೇ ಸಮಯಕ್ಕೆ ಹೃದಯಾಘಾತ ಸಂಭವಿಸಿ ಶೃತಿ ಮೃತಪಟ್ಟಿದ್ದಾರೆ.
Also Read: School Holiday : ಭಾನುವಾರವೂ ಮಕ್ಕಳಿಗೆ ಶಾಲೆ : ಪೋಷಕರಿಂದ ಬಾರೀ ಆಕ್ರೋಶ
ಮೃತ ಶೃತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಶೃತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ನಾಳೆ ಮದುವೆ ಮನೆಯ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಶುಭ ಕಾರ್ಯಕ್ರಮದ ಮನೆ ವಿಧಿಯಾಟಕ್ಕೆ ಸೂತಕದ ಮನೆಯಾಗಿ ಮಾರ್ಪಾಡಾಗಿದೆ.



