ಮಹೀಂದ್ರಾ XUV 700 ಖರೀದಿಯಲ್ಲಿ 1 ಲಕ್ಷಕ್ಕೂ ಅಧಿಕ ಉಳಿತಾಯ: ಹೊಸ ಜಿಎಸ್‌ಟಿ ದರದಿಂದ ಭಾರಿ ಲಾಭ

Mahindra xuv700 New GST Rate: ಹೊಸ ಜಿಎಸ್‌ಟಿ ದರ ಪರಿಷ್ಕರಣೆಯ ನಂತರ ಭಾರತದಲ್ಲಿ ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಕಡಿಮೆ ಮಾಡಿವೆ.

ಈ ಪಟ್ಟಿಯಲ್ಲಿ ದೇಸೀ ಕಂಪನಿ ಮಹೀಂದ್ರಾ ಕೂಡಾ ಸೇರಿದೆ. ಅದು ತನ್ನ ಜನಪ್ರಿಯ ಎಸ್‌ಯುವಿ ಮಹೀಂದ್ರಾ XUV 700 ಕಾರಿನ ಬೆಲೆಯನ್ನು ಕಡಿಮೆ ಮಾಡಿದೆ.

ಜೊತೆಗೆ ಅದರ ಎಲ್ಲಾ ರೂಪಾಂತರಗಳ ಬೆಲೆಯನ್ನು ಕಡಿಮೆ ಮಾಡಿದೆ. ಹಾಗಾದರೆ ಮಹೀಂದ್ರಾ XUV 700 ನ ಯಾವ ರೂಪಾಂತರದಲ್ಲಿ ನೀವು ಎಷ್ಟು ಉಳಿತಾಯ ಮಾಡಬಹುದು ಎಂದು ನೋಡೋಣ.

ಮಹೀಂದ್ರಾ XUV 700 ಯಾವ ರೂಪಾಂತರದಲ್ಲಿ ಎಷ್ಟು ಉಳಿತಾಯ?

ರೂಪಾಂತರಹಳೆ ಜಿಎಸ್‌ಟಿ + ಸೆಸ್‌ಹೊಸ ಜಿಎಸ್‌ಟಿ ದರಉಳಿತಾಯ
MX48%40%88,000 ರೂ.
AX348%40%1,06,500 ರೂ.
AX5 S48%40%1,10,200 ರೂ.
AX548%40%1,18,300 ರೂ.
AX748%40%1,31,900 ರೂ.
AX7 L48%40%1,43,000 ರೂ.

ಗ್ರಾಹಕರು ಆಯ್ಕೆ ಮಾಡುವ ಟ್ರಿಮ್ ಅನ್ನು ಅವಲಂಬಿಸಿ ಎಷ್ಟು ಉಳಿಸುತ್ತಾರೆ ಎಂಬುದನ್ನು ಮಹೀಂದ್ರಾ ಬಹಿರಂಗಪಡಿಸಿದೆ. ಮೇಲಿನ ಕೋಷ್ಟಕದಲ್ಲಿರುವಂತೆ ಬೇಸ್ ಟ್ರಿಮ್ ಹೊರತುಪಡಿಸಿ ಎಲ್ಲಾ ಟ್ರಿಮ್‌ಗಳು ₹ 1 ಲಕ್ಷಕ್ಕಿಂತ ಹೆಚ್ಚು ಅಗ್ಗವಾಗಿವೆ. ನೀವು ಆಯ್ಕೆ ಮಾಡುವ ಪವರ್‌ಟ್ರೇನ್ ಅನ್ನು ಅವಲಂಬಿಸಿ ನೀವು ಎಷ್ಟು ಉಳಿಸುತ್ತೀರಿ ಎಂಬುದನ್ನು ನಿಖರವಾಗಿ ತಿಳಿಯಲು ಹತ್ತಿರದ ಶೋ ರೂಂಗೆ ಭೇಟಿ ನೀಡಿ.

ಇದನ್ನೂ ಓದಿ: ಜಿಎಸ್‌ಟಿ ದರ ಕಡಿತ : ಟಾಟಾ ಕಾರು ಖರೀದಿಸುವವರಿಗೆ ಗುಡ್ ನ್ಯೂಸ್!

ಇಷ್ಟೆಲ್ಲಾ ಬೆಲೆ ಇಳಿದಿದ್ದಾರೂ ಹೇಗೆ?

ಮಹೀಂದ್ರಾ XUV700 ಕಾರು 4,000 mm ಗಿಂತ ಹೆಚ್ಚಿನ ವೀಲ್‌ಬೇಸ್ ಮತ್ತು 1,500 cc ಗಿಂತ ಹೆಚ್ಚಿನ ಎಂಜಿನ್ #ateವನ್ನು ಹೊಂದಿರುವ ವಿಭಾಗಕ್ಕೆ ಸೇರಿದೆ. ಹೊಸ ಜಿಎಸ್‌ಟಿ ದರ ಪರಿಷ್ಕರಣೆ ಆಗುವ ಮೊದಲು, ಮಹೀಂದ್ರಾ ಕಾರುಗಳು ಶೇಕಡಾ 48 ರಷ್ಟು ಜಿಎಸ್‌ಟಿ (ಶೇಕಡಾ 28 ಜಿಎಸ್‌ಟಿ + ಶೇಕಡಾ 20 ಸೆಸ್) ಗೆ ಒಳಪಟ್ಟಿತ್ತು. ಪರಿಷ್ಕೃತ ತೆರಿಗೆ ಸ್ಲ್ಯಾಬ್‌ಗಳ ನಂತರ, XUV700 ಈಗ ಏಕರೂಪದ 40 ಪ್ರತಿಶತ ಜಿಎಸ್‌ಟಿಯನ್ನು ವಿಧಿಸುತ್ತದೆ. ಇದು ಗ್ರಾಹಕರಿಗೆ ಶೇಕಡಾ 8 ರಷ್ಟು ನೇರ ಉಳಿತಾಯವನ್ನು ನೀಡುತ್ತದೆ.

ಗ್ರಾಹಕರಿಗೆ ಡಬಲ್ ಪ್ರಯೋಜನ ಹೇಗೆ?

ಮಹೀಂದ್ರಾ XUV700 ಖರೀದಿಸಲು ಇದು ಉತ್ತಮ ಸಮಯವೆನ್ನಬಹುದು. ಏಕೆಂದರೆ ಜಿಎಸ್‌ಟಿ ಪರಿಷ್ಕೃತ ಬೆಲೆ ಈಗಾಗಲೇ ಜಾರಿಗೆ ಬಂದಿದೆ. ಶಕ್ತಿಶಾಲಿ ಎಂಜಿನ್, ವಿಶಾಲವಾದ ಕ್ಯಾಬಿನ್ ಮತ್ತು ಸಾಕಷ್ಟು ವೈಶಿಷ್ಟ್ಯಗಳೊಂದಿಗೆ XUV700 ಹೆಚ್ಚು ಮೌಲ್ಯಯುತವಾಗಿದೆ. ವಾಹನದ ಎಕ್ಸ್-ಶೋರೂಂ ಬೆಲೆಯಲ್ಲಿನ ಕಡಿತದೊಂದಿಗೆ, RTO, ವಿಮೆ ಇತ್ಯಾದಿಗಳ ದರ ಸಹ ಕಡಿಮೆಯಾಗುತ್ತವೆ. ಇದರಿಂದ ಗ್ರಾಹಕರಿಗೆ ಡಬಲ್‌ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ: ಹೀರೋ ಗ್ಲಾಮರ್ ಎಕ್ಸ್ 125 : ಅತ್ಯಂತ ಕಡಿಮೆ ಬೆಲೆ, 1 ಲೀಟರ್‌ಗೆ 65 ಕಿ.ಮೀ. ಮೈಲೇಜ್

(New GST Rate Mahindra XUV 700 price reduced list of cut off price)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories