ಚಾಲೆಂಜಿಂಗ್ ಸ್ಟಾರ್ ದಚ್ಚು ಕೊಟ್ರು ಸಿಹಿ ಸುದ್ದಿ…! ಶಿವರಾತ್ರಿಗೆ ಥಿಯೇಟರ್ ಗೆ ಬರ್ತಾನೆ ರಾಬರ್ಟ್….!!

ಬಿಗ್ ಸ್ಟಾರ್ ಗಳ ಸಿನಿಮಾ ಥಿಯೇಟರ್ ಗೆ ಬರದೇ ಬೇಸತ್ತ ಪ್ರೇಕ್ಷಕರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಹಿಸುದ್ದಿ ನೀಡಿದ್ದು, ಶಿವರಾತ್ರಿಗೆ ರಾಬರ್ಟ್ ತೆರೆಗೆ ಬರೋ ಗುಡ್ ನ್ಯೂಸ್ ಸಿಕ್ಕಿದೆ.

ಮಾರ್ಚ್ ೧೧ ರ ಶಿವರಾತ್ರಿ ಹಬ್ಬದಂದು ರಾಬರ್ಟ್ ರಾಜ್ಯದಾದ್ಯಂತ ತೆರೆಗೆ ಬರಲಿದೆ. ಚಿತ್ರತಂಡ ಈ ದಿನಾಂಕ ಘೋಷಿಸಿದ್ದು ದಚ್ಚು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ಈಗಾಗಲೇ ರಾಬರ್ಟ್ ತೆರೆಗೆ ಬಂದು ತಿಂಗಳುಗಳೇ ಕಳೆದಿರಬೇಕಿತ್ತು. ಆದರೆ ಕೊರೋನಾದಿಂದ ರಾಬರ್ಟ್ ರಿಲೀಸ್ ಆಗಿರಲಿಲ್ಲ.

ಡಿಸೆಂಬರ್ ೨೫ ರ ಕ್ರಿಸ್ಮಸ್ ವೇಳೆಗೆ ಚಿತ್ರ ತೆರೆಗೆ ಬರೋ ಸುದ್ದಿಯಿತ್ತಾದರೂ ಚಿತ್ರತಂಡ ಥಿಯೇಟರ್ ಗೆ ಪ್ರೇಕ್ಷಕರಿಗೆ ೧೦೦ ಕ್ಕೆ ೧೦೦ ಪ್ರವೇಶ ಕೊಡೋದನ್ನೆ ಕಾಯುತ್ತಿತ್ತು. ಆದರೆ ಕೊನೆಗೂ ಸಧ್ಯ ಅನುಮತಿ ಸಿಗೋದು ಅನುಮಾನ ಎನ್ನಲಾಗಿದೆ.

ಹೀಗಾಗಿ ಈಗ ಮಾರ್ಚ್ ೧೧ ರ ಶಿವರಾತ್ರಿ ವೇಳೆ ರಾಬರ್ಟ್ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.
ಈಗಾಗಲೇ ಎಲ್ಲ ಸಿನಿಮಾ ಶೂಟಿಂಗ್ ಮುಗಿಸಿರುವ ದರ್ಶನ್ ಸಧ್ಯ ಬಿಡುವಾಗಿದ್ದು ಫ್ರೀ ಟೈಂನಲ್ಲಿ ಸ್ನೇಹಿತರ ಜೊತೆಗೆ ಬೈಕ್ ಟ್ರಿಪ್ ಹೋಗಿ ಎಂಜಾಯ್ ಮಾಡ್ತಿದ್ದಾರೆ.

Comments are closed.