ಚೈನೈ: ಇದು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ಸೂಪರ್ ಸ್ಟಾರ್ 6 ಲಕ್ಷ ರೂಪಾಯಿ ತೆರಿಗೆ ಉಳಿಸಲು ಹೋಗಿ ಮುಜಗರಕ್ಕಿಡಾದ ಕತೆ. ಅದು ಮತ್ಯಾರು ಅಲ್ಲ ತಲೈವಾ ಖ್ಯಾತಿಯ ಸೂಪರ್ ಸ್ಟಾರ್ ರಜನಿಕಾಂತ್. ರಜನಿಕಾಂತ್ ಟ್ಯಾಕ್ಸ್ ಉಳಿಸಲು ಹೋಗಿದ್ದಕ್ಕೆ ಗರಂ ಆಗಿರುವ ನ್ಯಾಯಾಲಯ ದಂಡದ ಎಚ್ಚರಿಕೆ ನೀಡಿದೆ.
ರಜನಿಕಾಂತ್ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆಯೇ ಕೋಟ್ಯಾಂತರ ರೂಪಾಯಿ. ಆದರೆ ಲಕ್ಷ ಹಣ ತೆರಿಗೆ ಪಾವತಿಸಲು ಹಿಂದೆ ಮುಂದೆ ನೋಡಿದ್ದಾರೆ. ಚೈನೈನ ಕೊಡಂಬಕ್ಕಮ್ ನಲ್ಲಿ ರಜನಿಕಾಂತ್ ಮಾಲಿಕತ್ವದ ಕಲ್ಯಾಣ ಮಂಟಪವಿದೆ. ಈ ಕಲ್ಯಾಣ ಮಂಟಪದ ತೆರಿಗೆ ಪಾವತಿಸುವಂತೆ ಸ್ಥಳೀಯ ಆಡಳಿತ ರಜನಿಕಾಂತ್ ಗೆ ಸೂಚಿಸಿತ್ತು.
ಆದರೆ ಕೇವಲ 6.5 ಲಕ್ಷ ರೂಪಾಯಿ ತೆರಿಗೆ ಪಾವತಿಸಲು ಸಿದ್ಧವಾಗದ ರಜನಿಕಾಂತ್, ಮಾರ್ಚ್ ನಿಂದ ಲಾಕ್ ಡೌನ್ ಜಾರಿಯಾಗಿದ್ದು, ಕಲ್ಯಾಣ ಮಂಟಪದಲ್ಲಿ ಯಾವುದೇ ಕಾರ್ಯಕ್ರಮ ನಡೆಯದೇ ಆದಾಯ ಬಂದಿಲ್ಲ. ಹೀಗಾಗಿ ತೆರಿಗೆಯಲ್ಲಿ ವಿನಾಯ್ತಿ ನೀಡಲು ಮನವಿ ಮಾಡಿದ್ದರು. ಇದಕ್ಕೆ ಒಪ್ಪದ ಸ್ಥಳೀಯ ಆಡಳಿತದ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ‘
6.5 ಲಕ್ಷ ರೂಪಾಯಿ ವಾರ್ಷಿಕ ತೆರಿಗೆ ಪಾವತಿಸುವುದನ್ನು ಬಿಟ್ಟು ನ್ಯಾಯಾಲಯದ ಮೊರೆ ಹೋದ ಸೂಪರ್ ಸ್ಟಾರ್ ಖ್ಯಾತಿಯ ರಜನಿಕಾಂತ್ ವಿರುದ್ಧ ನ್ಯಾಯಾಲಯ ಗರಂ ಆಗಿದ್ದು, ತೆರಿಗೆ ಪಾವತಿಸದೇ ಸಮಯ ವ್ಯರ್ಥ ಮಾಡಿದಲ್ಲಿ ದಂಡ ವಿಧಿಸುವ ಎಚ್ಚರಿಕೆ ನೀಡಿ ಛೀಮಾರಿ ಹಾಕಿದೆ.
ನ್ಯಾಯಾಲಯದಲ್ಲಿ ಆದ ಮುಖಭಂಗ ಹಾಗೂ ನ್ಯಾಯಾಧೀಶರ ಛೀಮಾರಿ ಬಳಿಕ ಎಚ್ಚೆತ್ತುಕೊಂಡ ರಜನಿಕಾಂತ್ ಪರ ವಕೀಲರು ತೆರಿಗೆ ಪಾವತಿ ಹಾಗೂ ಕೇಸ್ ವಾಪಸ್ ಪಡೆಯಲು ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ.
ರಜನಿಕಾಂತ್ ಒಡೆತನದ ಶ್ರೀರಾಘವೇಂದ್ರ ಕಲ್ಯಾಣಮಂಟಪ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತದೆ. ಆದರೂ ರಜನಿಕಾಂತ್ ಆದಾಯ ತೆರಿಗೆ ಪಾವತಿಸಲು ಹಿಂದೆ ಮುಂದೇ ನೋಡಿ ನ್ಯಾಯಾಲಯದಿಂದ ಮುಜುಗರಕ್ಕಿಡಾಗಿದ್ದು ಮಾತ್ರ ಅವರ ಸ್ಟಾರ್ ಗಿರಿಗೆ ಸರಿ ಹೊಂದೋ ವರ್ತನೆಯಲ್ಲ ಅಂತ ಜನ ಆಡಿಕೊಳ್ತಿದ್ದಾರೆ.