Bigg Boss Kannada 12: ಕನ್ನಡದ ಬಿಗ್‌ಬಾಸ್‌ಗೆ ತಪ್ಪದ ಸಂಕಷ್ಟ : ಮತ್ತೆ ಬಂದ್‌ ಆಗುತ್ತಾ ಬಿಗ್‌ಬಾಸ್‌ ಶೋ

Bigg Boss Kannada 12: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಸ್ಪರ್ಧೆ ಒಂದು ಬಾರಿ ಸ್ಥಗಿತಗೊಂಡು ಮತ್ತೆ ಪುನರಾರಂಭಗೊಂಡಿತ್ತು. ಈ ನಡುವಲ್ಲೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.

ಬಿಗ್‌ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ಸೇರಿ ನಾಲ್ವರ ವಿರುದ್ದ ಬಿಡದಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಾವಳಿಯ ಹುಡುಗಿ ರಕ್ಷಿತಾ ಶೆಟ್ಟಿ ವಿರುದ್ದ ಅಶ್ವಿನಿ ಗೌಡ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ವಕೀಲರಾದ ಪ್ರಶಾಂತ್‌ ಮೆಹ್ತಾಲ್‌ ಬಿಡದಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಿಗ್‌ಬಾಸ್‌ ಶೋನಲ್ಲಿ ಸ್ಪರ್ಧಿಗಳಾದ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಬಾರೀ ಜಗಳ ಏರ್ಪಟ್ಟಿತ್ತು.

Also Read: ಚಂದನವನ ನಿರ್ಮಾಪಕ ಕೆ.ಗೋವಿಂದ್​ ವಿಧಿವಶ

ಈ ವೇಳೆಯಲ್ಲಿ ರಕ್ಷಿತಾ ಶೆಟ್ಟಿಯನ್ನು ಅಶ್ವಿನಿ ಗೌಡ ಅವಳು ಎಸ್‌ ಕ್ಯಾಟಗರಿ ಎಂದು ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಈ ವಿಚಾರ ಬಾರೀ ಚರ್ಚೆಗೆ ಕಾರಣವಾಗಿತ್ತು.

ಅಶ್ವಿನಿ ಗೌಡ ಜೊತೆಗೆ ಬಿಗ್‌ಬಾಸ್‌ ಶೋನ ಬ್ಯುಸಿನೆಸ್‌ ಹೆಡ್ ಪ್ರಶಾಂತ್‌ ನಾಯ್ಕ್‌, ಸುಷ್ಮಾ ಮತ್ತು ಪ್ರಕಾಶ್‌ ಸೇರಿ ನಾಲ್ವರ ವಿರುದ್ದ ದೂರು ದಾಖಲಾಗಿದೆ.

ಬಿಡದಿ ಠಾಣೆಯ ಪೊಲೀಸರು ಸ್ಪರ್ಧಿ ಅಶ್ವಿನಿ ಗೌಡ ಸೇರಿ ನಾಲ್ವರನ್ನು ಬಂಧಿಸುತ್ತಾರಾ ? ಅನ್ನೋದು ಕುತೂಹಲ ಮೂಡಿಸಿದೆ. ಪರಿಸರ ಮಾಲಿನ್ಯ ಕಾಪಾಡದ ಹಿನ್ನೆಲೆಯಲ್ಲಿ ಬಿಗ್‌ಬಾಸ್‌ ಶೋ ನಡೆಯುತ್ತಿರುವ ಸ್ಟುಡಿಯೋಗೆ ಇತ್ತೀಚಿಗಷ್ಟೇ ಬೀಗ ಜಡಿಯಲಾಗಿತ್ತು.

Also Read: Bigg Boss : ಕಿಚ್ಚನ ವಾರದ ಪಂಚಾಯ್ತಿಗೆ ಕಾದು ಕುಳಿತ ಪ್ರೇಕ್ಷಕರು : ಕಾದಿದೆ ಜಾನ್ವಿ – ಅಶ್ವಿನಿ ಗೌಡಗೆ ಮಾರಿ ಹಬ್ಬ

ನಂತರದಲ್ಲಿ ಸ್ಪರ್ಧೆ ಪೈಪೋಟಿಯಿಂದ ಕೂಡಿತ್ತು. ಇದೀಗ ಸ್ಪರ್ಧಿಗಳ ನಡುವಿನ ಪರಸ್ಪರ ಕಿತ್ತಾಟ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories