ಕೊಟ್ಟ ಮಾತು ಉಳಿಸಿಕೊಂಡ ನಟ ಸೋನು ಸೂದ್ : ಅಮರಾವತಿಯ ಬಡ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್

0

ಅಮರಾವತಿ : ಬಡವರು, ಅಶಕ್ತರಿಗೆ ಧನಿಯಾಗುವ ಬಾಲಿವುಡ್ ನಟ ಸೋನು ಸೂದ್ ಇದೀಗ ಬಡ ರೈತನ ಕಷ್ಟಕ್ಕೆ ಹೆಗಲು ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆಯೇ ರೈತನಿಗೆ ಟ್ರ್ಯಾಕ್ಟರ್ ಖರೀದಿಸಿ ಗಿಫ್ಟ್ ಕೊಟ್ಟಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರ್ ಜಿಲ್ಲೆಯ ಮದನಪಲ್ಲಿಯ ರೈತರೋರ್ವರು ಎತ್ತುಗಳಿಲ್ಲದೇ ಹೆಣ್ಣು ಮಕ್ಕಳನ್ನೆ ಎತ್ತುಗಳನ್ನಾಗಿಸಿಕೊಂಡು ಹೊಲದಲ್ಲಿ ಉಳುಮೆ ಮಾಡುತ್ತಿದ್ದರು. ಈ ವಿಡಿಯೋವನ್ನು ಪತ್ರಕರ್ತರೊಬ್ಬರು ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು, ಈ ವಿಡಿಯೋ ನೋಡಿದ್ದ ನಟ ಸೋನು ಸೂದ್ ತಾವು ನೀಡಿದ್ದ ಭರವಸೆಯಂತೆ ರೈತನಿಗೆ ಟ್ರ್ಯಾಕ್ಟ್ ಗಿಫ್ಟ್ ನೀಡಿದ್ದಾರೆ.

ನಟ ಸೋನು ಸೂದ್ ಆರಂಭದಲ್ಲಿ ಒಂದು ಜೊತೆ ಎತ್ತುಗಳನ್ನು ಕೊಡಿಸುವುದಾಗಿ ಘೋಷಿಸಿದರು, ನಂತರ ಮನಸ್ಸು ಬದಲಾಯಿಸಿದ ಸೋನು ಈ ಕುಟುಂಬಕ್ಕೆ ಟ್ರ್ಯಾಕ್ಟರ್ ಅವಶ್ಯಕತೆಯಿದೆ. ರೈತ ದೇಶದ ಹೆಮ್ಮೆ ಹೀಗಾಗಿ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್ ಕೊಡಿಸುವುದಾಗಿ ತಿಳಿಸಿದ್ದರು. ಅಲ್ಲದೇ ಹೆಣ್ಣು ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಲಿ ಎಂದು ಹೇಳಿದ್ದಾರೆ.

Leave A Reply

Your email address will not be published.