Mangaluru Scam: ಟ್ರೇಡಿಂಗ್ನಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಬರೋಬ್ಬರಿ 32 ಲಕ್ಷ ರೂಪಾಯಿ ಮೋಸ
ಮಂಗಳೂರು : Mangaluru Scam: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಟ್ರೇಡಿಂಗ್ ಮೂಲಕ ಹಣ ಸಂಪಾದನೆ ಮಾಡುವುದು ಹೊಸ ಟ್ರೆಂಡ್ ಆಗಿದೆ. ಇದೇ ರೀತಿ ಆನ್ಲೈನ್ ಟ್ರೇಡಿಂಗ್ನಲ್ಲಿ ನಿಮಗೆ ಹೆಚ್ಚು ಲಾಭಾಂಶ ದೊರೆಯುವಂತೆ ಮಾಡುತ್ತೇನೆ ಎಂದು ನಂಬಿಸಿ ಬರೋಬ್ಬರಿ 32 ಲಕ್ಷ ರೂಪಾಯಿ ವಂಚಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿರುವ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 9ರಂದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ದೂರದಾರರು ಫೇಸ್ಬುಕ್(Facebook) ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾವ್ಯಾ ಶೆಟ್ಟಿ ಎಂಬವರು ಫ್ರೆಂಡ್ಶಿಪ್ ವಿನಂತಿ ಕಳಿಸಿದ್ದರು ಎನ್ನಲಾಗಿದೆ. ಈಕೆ ತಾನು ಮುಂಬೈನಲ್ಲಿ ಟ್ರೇಡಿಂಗ್ ಕೆಲಸ ಮಾಡುತ್ತಿದ್ದು, ಹೆಚ್ಚಿನ ಲಾಭ ಪಡೆಯುವುದು ಹೇಗೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ನಂಬಿದ ದೂರುದಾರರು ಟ್ರೇಡಿಂಗ್ನಲ್ಲಿ ತಾನೂ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇದಾದ ಬಳಿಕ ಕಾವ್ಯಾ ವಾಟ್ಸಾಪ್ ಮೂಲಕ ಲಿಂಕ್ ಒಂದನ್ನು ಕಳಿಸಿದ್ದು ಅದರಲ್ಲಿ ದೂರುದಾರರ ವೈಯಕ್ತಿಕ ವಿವರಗಳನ್ನು ನಮೂದಿಸಬೇಕಿತ್ತು. ಇದಾದ ಬಳಿಕ ಷೇರು ಖರೀದಿಗೆಂದು ದೂರುದಾರ 40 ಸಾವಿರ ರೂಪಾಯಿ ಪಾವತಿಸಿದ್ದು. ಕೆಲವೇ ದಿನಗಳಲ್ಲಿ ಅವರಿಗೆ 9500 ರೂಪಾಯಿ ಲಾಭಾಂಶ ದೊರಕಿತ್ತು. ಇದಾದ ಬಳಿಕ 2 ಲಕ್ಷ ರೂಪಾಯಿ ಷೇರು ಖರೀದಿ ಮಾಡಿದ್ದು 23760 ರೂಪಾಯಿ ಲಾಭಾಂಶ ಪಡೆದಿದ್ದರು.
Also Read: ಕರಾವಳಿಯಲ್ಲಿ ಗುಡುಗು ಸಹಿತ ಮಳೆ, ರೈತರಲ್ಲಿ ಆತಂಕ : ಇನ್ನೆಷ್ಟು ದಿನ ಸುರಿಯಲಿದೆ ಮಳೆ ?
ಈ ಆ್ಯಪ್ನಿಂದ ಹೆಚ್ಚು ಹಣ ಗಳಿಸಬಹುದು ಎಂದು ಕೊಂಡ ದೂರುದಾರ, ಹಂತ ಹಂತವಾಗಿ ಒಟ್ಟು 32,06,880 ರೂ.ಗಳನ್ನು ಸೆ.13ರಿಂದ ಅ.24ರ ವರೆಗೆ ಕಾವ್ಯಾ ಎಂಬಾಕೆ ನೀಡಿದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಾ ಹೋಗಿದ್ದರು.
ಆದರೆ ಇದಾದ ಬಳಿಕ ದೂರುದಾರರಿಗೆ ಯಾವುದೇ ಲಾಭಾಂಶ ಬಂದಿಲ್ಲ. ಕೊಟ್ಟ ಹಣವನ್ನೂ ವಾಪಾಸ್ ನೀಡಿಲ್ಲ. ತಾನು ಮೋಸಕ್ಕೆ ಒಳಗಾಗಿದ್ದೇನೆ ಎಂದು ತಿಳಿದ ಬಳಿಕ ದೂರುದಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ .
Also Read: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ : 38 ಶವಗಳ ತನಿಖೆ ಬಿಗಿಗೊಳಿಸಿದ ಎಸ್ಐಟಿ



