ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ: ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ?

Solar Eclipse 2025: ಈ ವರ್ಷದ ಸೆಪ್ಟೆಂಬರ್‌ ತಿಂಗಳವು ಎರಡೆರಡು ಖಗೋಳ ಕೌತುಕಗಳಿಗೆ ಸಾಕ್ಷಿಯಾಗಲಿದೆ. ಮೊದಲನೇಯದು ಸೆಪ್ಟೆಂಬರ್‌ 7 ರಂದು ನಡೆದ ಚಂದ್ರ ಗ್ರಹಣವಾದರೆ, ಇನ್ನೊಂದು ಇದೇ ಸೆಪ್ಟೆಂಬರ್‌ 21 ರಂದು ಸೂರ್ಯ ಗ್ರಹಣ ನಡೆಯಲಿದೆ.

ಹಿಂದೂ ಧರ್ಮದ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಗಳಿಗೆ ಅದರದೇ ಆದ ಮಹತ್ವವಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಈ ಸೂರ್ಯಗ್ರಹಣವು ಬಹಳ ವಿಶೇಷವಾಗಿದೆ. ಏಕೆಂದರೆ ಈ ವರ್ಷ ಸೂರ್ಯ ಗ್ರಹಣವು ಪಿತೃ ಪಕ್ಷದ ಅಮಾವಾಸ್ಯೆಯ ದಿನ ಜರುಗಲಿದೆ.

ಈ ವರ್ಷದ ಪಿತೃ ಪಕ್ಷವು ಚಂದ್ರಗ್ರಹಣದೊಂದಿಗೆ ಪ್ರಾರಂಭವಾಗಿ ಸೂರ್ಯಗ್ರಹಣದೊಂದಿಗೆ ಕೊನೆಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಬಹಳ ಮುಖ್ಯವಾದ ಘಟನೆ ಎಂದು ಪರಿಗಣಿಸಲಾಗಿದೆ.

ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?

ಆಕಾಶದಲ್ಲಿ ನಡೆಯುವ ಈ ವಿದ್ಯಮಾನ ದಕ್ಷಿಣ ಗೋಳಾರ್ಧದದ ಜನರು ಕಣ್ತುಂಬಿಕೊಳ್ಳಬಹುದು. ನ್ಯೂಜಿಲೆಂಡ್, ಪೂರ್ವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಪೆಸಿಫಿಕ್‌ನ ಕೆಲವು ಭಾಗಗಳಲ್ಲಿ ಸೂರ್ಯೋದಯದ ಸಮಯದಲ್ಲಿ ಗ್ರಹಣ ಗೋಚರಿಸುತ್ತದೆ.

ಡ್ಯುನೆಡಿನ್‌ನಂತಹ ಸ್ಥಳಗಳು ಸುಮಾರು 72% ರಷ್ಟು ಸೂರ್ಯಗ್ರಹಣವನ್ನು ನೋಡಬಹುದಾಗಿದೆ. ಅಂಟಾರ್ಕ್ಟಿಕಾದಲ್ಲಿ ವೀಕ್ಷಕರು ಇನ್ನೂ ಹೆಚ್ಚಿನ ಗ್ರಹಣ ಗೋಚರವನ್ನು ನೋಡಬಹುದು.

ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆಯೆ?

ಉತ್ತರ ಗೋಳಾರ್ಧದಲ್ಲಿ ಸೂರ್ಯಗ್ರಹಣವು ಸಂಪೂರ್ಣವಾಗಿ ಅಗೋಚರವಾಗಿರುತ್ತದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಅಫ್ಘಾನಿಸ್ತಾನ, ದಕ್ಷಿಣ ಅಮೆರಿಕಾ ಮತ್ತು ಉತ್ತರ ಅಮೆರಿಕಾದಂತಹ ದೇಶಗಳಲ್ಲಿನ ಜನರು ಗ್ರಹಣದ ಯಾವುದೇ ಹಂತವನ್ನು ನೋಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಸುಖ, ಸಂಪತ್ತು, ಸಮೃದ್ಧಿಗಾಗಿ ಮಹಾಲಕ್ಷ್ಮಿ ವ್ರತ: ದಿನಾಂಕ, ಸಮಯ, ವ್ರತಾಚರಣೆ ತಿಳಿಯಿರಿ

ಸೂರ್ಯಗ್ರಹಣ ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?

ಸೂರ್ಯ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10:59 ಕ್ಕೆ ಪ್ರಾರಂಭವಾಗಿ ಬೆಳಿಗ್ಗೆ 03:23 ಕ್ಕೆ ಕೊನೆಗೊಳ್ಳುತ್ತದೆ.

ಸೂರ್ಯಗ್ರಹಣದ ಪರಿಣಾಮ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ಶನಿಯ ಸಾಡೇಸಾತಿ ಮೇಷ, ಕುಂಭ ಮತ್ತು ಮೀನ ರಾಶಿಯ ಮೇಲೆ ನಡೆಯುತ್ತಿರುತ್ತದೆ. ಶನಿಯ ಸಾಡೇಸಾತಿಯ ಮೊದಲ ಹಂತ ಮೇಷ ರಾಶಿಯ ಮೇಲೆ, ಎರಡನೇ ಹಂತ ಮೀನ ರಾಶಿಯ ಮೇಲೆ ಮತ್ತು ಶನಿಯ ಸಾಡೇಸಾತಿಯ ಮೂರನೇ ಮತ್ತು ಕೊನೆಯ ಹಂತ ಕುಂಭ ರಾಶಿಯ ಮೇಲೆ ನಡೆಯುತ್ತಿದೆ.

ಶನಿಯ ಸಾಡೇಸಾತಿ ಸಿಂಹ ಮತ್ತು ಧನು ರಾಶಿಯ ಮೇಲೆ ನಡೆಯುತ್ತಿದೆ. ಸರ್ವಪಿತೃ ಅಮಾವಾಸ್ಯೆಯಂದು ಸಂಭವಿಸುವ ಸೂರ್ಯಗ್ರಹಣವು ಶನಿಯ ಸಾಡೇಸಾತಿಯಿಂದ ಬಳಲುತ್ತಿರುವ ರಾಶಿಯವರಿಗೆ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ, ಈ ರಾಶಿಯವರು ಸರ್ಕಾರಿ ವ್ಯವಸ್ಥೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಪೂರ್ವಜರ ಆಸ್ತಿಯಲ್ಲಿ ವಿವಾದಗಳು ಉಂಟಾಗಬಹುದು. ಮಕ್ಕಳ ಸ್ಥಿತಿ ಹದಗೆಡಬಹುದು. ನೀವು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬಹುದು. ರಾಜಕೀಯ ಪರಿಸ್ಥಿತಿ ಪ್ರಕ್ಷುಬ್ಧವಾಗಿರಬಹುದು. ನಾಯಕತ್ವದಲ್ಲಿ ಸಮಸ್ಯೆಗಳು ಬರಬಹುದು.

ಇದನ್ನೂ ಓದಿ: ವಾಸ್ತು ಸಲಹೆ: ಧನ ಪ್ರಾಪ್ತಿಗೆ ಕುಬೇರನನ್ನು ಮೆಚ್ಚಿಸುವುದು ಹೇಗೆ?

(when is Solar Eclipse 2025 exact date time and effect according to astrology)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories