Brahmavar: ಮನೆ ನಿರ್ಮಾಣ ಸ್ಥಳದಲ್ಲಿದ್ದ ₹2 ಲಕ್ಷ ಮೌಲ್ಯದ ಕಾಂಕ್ರೀಟ್ ಶೀಟ್‌ ಕಳವು

Brahmavar: ನಿರ್ಮಾಣ ಹಂತದ ಮನೆಯ ಜಾಗದಲ್ಲಿದ್ದ ಕಾಂಕ್ರೀಟ್‌ ಶೀಟ್‌ಗಳನ್ನು ಕಳವು ಮಾಡಿದ ಪ್ರಕರಣ ಬ್ರಹ್ಮಾವರದಲ್ಲಿ ನಡೆದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ(Brahmavar) ತಾಲೂಕಿನ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಧರ್ಮಾವರಂ ಬಳಿ ನಿರ್ಮಾಣ ಹಂತದಲ್ಲಿರುವ ಮನೆ ಜಾಗದಲ್ಲಿ ಇಟ್ಟಿದ್ದ ಸುಮಾರು ₹ 2 ಲಕ್ಷ ಮೌಲ್ಯದ ಕಬ್ಬಿಣದ ಕಾಂಕ್ರೀಟ್ ಶೀಟ್‌ಗಳನ್ನು ಕಳ್ಳರು ಕಳವು ಮಾಡಿದ್ದಾರೆ.

Also Read: ಕಾಪು: ರಸ್ತೆ ಮಧ್ಯೆ ಬಸ್‌ ನಿಲ್ಲಿಸಿ ಜಗಳ : ಖಾಸಗಿ ಬಸ್‌ ಚಾಲಕ, ನಿರ್ವಾಹಕ, ಟೈಮ್‌ ಕೀಪರ್‌ ಅರೆಸ್ಟ್‌

ಗುಂಡ್ಮಿಯ ನಿವಾಸಿ ಆಗಿರುವ ಮಹೇಂದ್ರ ಎಂಬವರು ಧರ್ಮಾವರಂ ಬಳಿಯ ಪ್ರಮೀಳಾ ಅವರ ಮನೆ ನಿರ್ಮಾಣದ ಸಂಬಂಧ ಒಟ್ಟು 250 ಕಬ್ಬಿಣದ ಕಾಂಕ್ರೀಟ್ ಶೀಟ್‌ಗಳನ್ನು ಸ್ಥಳದಲ್ಲಿ ಇರಿಸಿದ್ದರು. ಈ ಪೈಕಿ 180 ಶೀಟುಗಳು ಇದೀಗ ಕಳವಾಗಿದೆ.

ಮಹೇಂದ್ರ ಎಂಬವರಿಗೆ ಸೇರಿದ ಕೆಲಸದವರು ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಳುವಾದ 180 ಕಬ್ಬಿಣದ ಕಾಂಕ್ರೀಟ್ ಶೀಟುಗಳ ಅಂದಾಜು ಮೌಲ್ಯ ರೂ 2 ಲಕ್ಷ ಎಂದು ಅಂದಾಜಿಸಲಾಗಿದೆ.

Also Read: ಕುಂದಾಪುರ: Crane accident Kundapur: ಖಾಸಗಿ ಬಸ್​ ಚಾಲಕನ ನಿರ್ಲಕ್ಷ್ಯ​ , ಕ್ರೇನ್ ಹರಿದು ಯುವಕ ಮೃತ್ಯು

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಬ್ರಹ್ಮಾವರ ಠಾಣೆಯ ಪೊಲೀಸರು ತನಿಖೆ ಮೂಡಿದೆ. ಸಾರ್ವಜನಿಕ ಸ್ಥಳದಲ್ಲಿ ನಡೆದಿರುವ ಈ ಕಳವು ಪ್ರಕರಣ ಗುತ್ತಿಗೆದಾರರಿಗೆ ಆತಂಕ ಮೂಡಿಸಿದೆ. ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories