ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ : 38 ಶವಗಳ ತನಿಖೆ ಬಿಗಿಗೊಳಿಸಿದ ಎಸ್ಐಟಿ

Dharmasthala burial case SIT : ಧರ್ಮಸ್ಥಳದಲ್ಲಿ ಶವಹೂತಿಟ್ಟ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಧರ್ಮಸ್ಥಳ ಶ್ರೀ ಕ್ಷೇತ್ರವನ್ನು ಟಾರ್ಗೆಟ್ ಮಾಡಿದ ಬುರುಡೆ ಗ್ಯಾಂಗ್ ಇದೀಗ ತಾನೇ ಸಂಕಷ್ಟದಲ್ಲಿ ಸಿಲುಕಿ ಪ್ರಕರಣ ರದ್ದತಿ ಮುಂದಾಗುತ್ತಿದೆ.
ಆದರೆ ಈ ಎಲ್ಲದರ ನಡುವೆ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಎಸ್ಐಟಿ ಮತ್ತಷ್ಟು ಆಳವಾದ ತನಿಖೆಗೆ ಮುಂದಾಗಿದೆ ಎನ್ನಲಾಗಿದೆ. ಧರ್ಮಸ್ಥಳದಲ್ಲಿ ಸಂಭವಿಸಿರುವ 38 ಅಸಹಜ ಸಾವುಗಳ ಬಗ್ಗೆ ಎಸ್ಐಟಿ ಅಧಿಕಾರಿಗಳು ಕೂಲಕುಂಷ ತನಿಖೆಗೆ ಮುಂದಾಗಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ 38 ಮೃತದೇಹಗಳನ್ನು ವಿಲೇವಾರಿ ಮಾಡಿತ್ತು. ಅಸಹಜ ಸಾವು ಹಿನ್ನೆಲೆಯಲ್ಲಿ ಶವಗಳ ಗುರುತು ಪತ್ತೆಯಾಗಿಲ್ಲ ಎಂಬ ಕಾರಣ ನೀಡಿ ಧರ್ಮಸ್ಥಳ ಗ್ರಾಮ ಪಂಚಾಯತ್ 38 ಅನಾಮಧೇಯ ಶವಗಳನ್ನು ವಿಲೇವಾರಿ ಮಾಡಿತ್ತು. ಆದರೆ ಈ ಬಗ್ಗೆ ಬೆಳ್ತಂಗಡಿ ಅಥವಾ ಧರ್ಮಸ್ಥಳ ಠಾಣೆಗಳಲ್ಲಿ ಯುಡಿಆರ್ ದಾಖಲೆ ಲಭ್ಯವಾಗಿಲ್ಲ.
ಕಳೆದ ಮೂರು ದಶಕಗಳಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ ವಿಲೇವಾರಿ ಮಾಡಿರುವ ಶವಗಳ ವಿಲೇವಾರಿ ಕಲೆ ಹಾಕಿರುವ ಎಸ್ಐಟಿ ಇಲ್ಲಿ ಹೂತಿಡಲಾಗಿರುವ 38 ಶವಗಳ ಸಂಬಂಧ ಗಂಭೀರ ತನಿಖೆ ಆರಂಭಿಸಿದೆ.
ಇದನ್ನೂ ಓದಿ : ಬೆಳ್ತಂಗಡಿ : ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ಹಾವು ಕಡಿತ, ಜೀವ ಉಳಿಸಿದ ನಾಟಿ ವೈದ್ಯ
ವಿಲೇವಾರಿ ಆಗಿರುವ 38 ಶವಗಳಿಗೂ ಬೆಳ್ತಂಗಡಿ ಮತ್ತು ಧರ್ಮಸ್ಥಳ ಠಾಣೆಗಳಲ್ಲಿ ದಾಖಲಾಗಿರುವ ಯುಡಿಆರ್ ಪ್ರಕರಣಗಳಿಗೂ ತಾಳೆ ಹಾಕಿದಾಗ ಕೆಲ ಪ್ರಕರಣಗಳ ಬಗ್ಗೆ ದಾಖಲೆ ಇಲ್ಲದೇ ಇರುವುದು ಎಸ್ಐಟಿ ಗಮನಕ್ಕೆ ಬಂದಿದೆ.
ಇವುಗಳಲ್ಲಿ ಬಹುತೇಕ 2 ರಿಂದ ಮೂರು ದಶಕಗಳಿಗೂ ಹಳೆಯ ಪ್ರಕರಣಗಳಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ದಾಖಲೆಗಳು ಕಳೆದು ಹೋಗಿರುವ ಅಥವಾ ನಾಶಪಡಿಸಿರುವ ಸಾಧ್ಯತೆಯಿದೆ.
ಯುಡಿಆರ್ ಪ್ರಕರಣಗಳಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆಗಳಿಗೆ ಸಂಬಂಧಿಸಿದ ದಾಖಲೆ ಇರಬೇಕು.ಈ ದಾಖಲೆಗಳನ್ನು ಪೊಲೀಸ್ ಠಾಣೆಗಳಲ್ಲಿ ರಕ್ಷಿಸಿ ಇಡಬೇಕು. ಯುಡಿಆರ್ ದಾಖಲೆ ಸಿಕ್ಕಿಲ್ಲ ಎಂದ ಮಾತ್ರಕ್ಕೆ 38 ಮೃತದೇಹಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ.
ಇದನ್ನೂ ಓದಿ : ಹಿಂದೂ ಮುಖಂಡ ಶರಣ್ ಪಂಪ್ವೆಲ್ ಪೊಲೀಸ್ ವಶಕ್ಕೆ : ಆಕ್ಷೇಪಾರ್ಹ ಫೇಸ್ ಬುಕ್ ಪೋಸ್ಟ್
ಹೀಗಾಗಿ ಈ ಪ್ರಕರಣ ಸಂಬಂಧ ಮತ್ತಷ್ಟು ಆಳಕ್ಕೆ ಇಳಿದಿರುವ ಎಸ್ಐಟಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ .
Dharmasthala burial case: SIT tightens investigation into 38 bodies



