ಮರುಜೀವ ಪಡೆಯಲು ಸಜ್ಜಾದ ಚಿನ್ನಸ್ವಾಮಿ ಕ್ರೀಡಾಂಗಣ : ರಾಜ್ಯ ರಾಜಧಾನಿ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್
ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆ ಇನ್ನೂ ಮಾಸಿಲ್ಲ. ಇದು ಚಿನ್ನಸ್ವಾಮಿ ಕ್ರೀಡಾಂಗಣದ ಇತಿಹಾಸಕ್ಕೆ ಬಹುದೊಡ್ಡ ಕಪ್ಪು ಚುಕ್ಕೆಯನ್ನಿಟ್ಟಿದೆ. ಈ ಘಟನೆ ಬಳಿಕ . ನಿವೃತ್ತ ನ್ಯಾ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ಸಮಿತಿ ರಚಿಸಿ ಸರ್ಕಾರ ವರದಿ ಕೇಳಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ 16 ಲೋಪಗಳನ್ನು ಗುರುತಿಸಿದ್ದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಈ ವರದಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ ನೀಡದಂತೆ ಉಲ್ಲೇಖಿಸಲಾಗಿತ್ತು. ಸ್ಟೇಡಿಯಂನ ಗೇಟ್ಗಳು ಚಿಕ್ಕದಾಗಿವೆ. ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್ ಸಂಚಾರಕ್ಕೆ ಸ್ಟೇಡಿಯಂ ಸುತ್ತ ವ್ಯವಸ್ಥೆ ಇಲ್ಲ. ವಾಹನಗಳ ಪಾರ್ಕಿಂಗ್ಗೆ ಸೂಕ್ತ ಅವಕಾಶ ಇಲ್ಲ. ಕ್ರೀಡಾಂಗಣದ ಒಳಭಾಗದಲ್ಲಿರುವ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಸೆಟ್ಬ್ಯಾಕ್ ಜಾಗ ನೀಡಿಲ್ಲ. ತುರ್ತು ನಿರ್ಗಮನ ವ್ಯವಸ್ಥೆ ಎಲ್ಲಿಯೂ ಇಲ್ಲ. ಸ್ಟೇಡಿಯಂ ತಡೆಗೋಡೆ ಕೂಡ ಅವೈಜ್ಞಾನಿಕ ಹೀಗೆ ನಾನಾ ಕಾರಣಗಳನ್ನು ಈ ವರದಿಯಲ್ಲಿ ನೀಡಲಾಗಿತ್ತು .
ಇದನ್ನೂ ಓದಿ: ಆರ್ಸಿಬಿಗೆ ಹೊಸ ತವರು; ಬೆಂಗಳೂರಲ್ಲಿ ಆಡುವುದು ಅನುಮಾನ
ಇದೀಗ ವರದಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು KSCA ನಿರ್ಧರಿಸಿದೆ. ಸದ್ಯದಲ್ಲಿಯೇ ಎಲ್ಲಾ ಲೋಪದೋಷಗಳು ಸರಿಯಾಗಲಿದ್ದು ಮತ್ತೊಮ್ಮೆ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ರಂಗೇರುವುದು ಪಕ್ಕಾ ಎನ್ನಲಾಗಿದೆ.



