ಸಿಸಿಎಲ್​ ಪಂದ್ಯಾವಳಿಗೆ ತೆರೆ : 12 ವರ್ಷಗಳ ಬಳಿಕ ಕರ್ನಾಟಕ ಬುಲ್ಡೋಜರ್ಸ್​ಗೆ ಚಾಂಪಿಯನ್​ ಪಟ್ಟ

ವಿವಿಧ ಚಿತ್ರರಂಗದವರು ಒಟ್ಟಾಗಿ ಆಡುವ ಸೆಲೆಬ್ರಿಟಿ ಕ್ರಿಕೇಟ್​ ಲೀಗ್​ಗೆ ಅದ್ಧೂರಿ ತೆರೆ ಬಿದ್ದಿದೆ. ಕೊಯಮತ್ತೂರಿನಲ್ಲಿ ನಡೆದ ಫೈನಲ್​ ಪಂದ್ಯಾವಳಿಯಲ್ಲಿ ಬಂಗಾಳ ತಂಡದ ವಿರುದ್ಧ ಸೆಣೆಸಿದ ಕರ್ನಾಟಕ ಬುಲ್ಡೋಜರ್ಸ್​ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಸತತ 12 ವರ್ಷಗಳ ಬಳಿಕ ಸುದೀಪ್​ ನೇತ್ವತ್ವದ ತಂಡ ಗೆಲುವು ದಾಖಲಿಸಿದಂತಾಗಿದೆ.
ಆರು ಬಾರಿ ಫೈನಲ್​ ಪ್ರವೇಶಿಸಿದ್ದರೂ ಕರ್ನಾಟಕ ಬುಲ್ಡೋಜರ್​ ತಂಡಕ್ಕೆ ಚಾಂಪಿಯನ್​ ಪಟ್ಟ ಅಲಂಕರಿಸಲು ಸಾಧ್ಯವಾಗಿರಲಿಲ್ಲ. ಈಗಾಗಲೇ 2 ಬಾರಿ ಚಾಂಪಿಯನ್​ ಆಗಿರುವ ಬುಲ್ಡೋಜರ್ಸ್​ ಕಳೆದ 12 ವರ್ಷಗಳಿಂದ ಮೂರನೇ ಗೆಲುವಿನ ಕಾತುರದಲ್ಲಿತ್ತು. ಇದೀಗ ಆ ಕನಸು ನನಸಾಗಿದೆ.

ಇದನ್ನೂ ಓದಿ: ಐಸಿಸಿ ಟಿ20 ವಿಶ್ವಕಪ್​ : ಭಾರತದೊಂದಿಗಿನ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನ

ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಬೆಂಗಾಲ್​ ಟೈಗರ್ಸ್ ತಂಡ ಕರ್ನಾಟಕದ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಗಿತ್ತು. 20 ಓವರ್​​ಗಳಲ್ಲಿ ಕೇವಲ 129 ರನ್​ಗಳನ್ನು ಕಲೆ ಹಾಕಲಷ್ಟೇ ಶಕ್ತವಾಗಿತ್ತು. ಈ ಸವಾಲು ಬೆನ್ನಟ್ಟಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಕ್ಕೆ ರಾಜೀವ್​​ ಆಸರೆಯಾದರು. ರಾಜೀವ್​ ಔಟಾದ ಬಳಿಕ ತಂಡದ ಪ್ರದರ್ಶನ ಕೊಂಚ ನಿಧಾನಗತಿಯಲ್ಲಿ ಸಾಗಿತು.ಆದರೆ ಇದಾದ ಬಳಿಕ ಮತ್ತೆ ಮುನ್ನಡೆ ಸಾಧಿಸಿದ ಕರ್ನಾಟಕ ಬುಲ್ದೋಜರ್ಸ್​ ತಂಡ ಅಭೂತಪೂರ್ವ ಗೆಲುವು ದಾಖಲಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories