Mandeep Roy death: ಕನ್ನಡ ಚಿತ್ರರಂಗದ ಹಿರಿಯ ನಟ ಮನ್‌ ದೀಪ್‌ ರಾಯ್‌ ನಿಧನ

(Mandeep Roy death) ಕನ್ನಡ ಚಿತ್ರರಂಗದ ಹಿರಿಯ ನಟ ಮನ್‌ ದೀಪ್‌ ರಾಯ್‌ ಹೃದಯಾಘಾತದಿಂದ ನಿಧನರಾಗಿದ್ದು, ಕಾವಲ್‌ ಭೈರಸಂದ್ರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಳಿಗ್ಗೆ 12 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕಳೆದ ಡಿಸೆಂಬರ್‌ ನಲ್ಲಿ ಒಂದು ಬಾರಿ ಹೃದಯಾಘಾತವಾಗಿದ್ದು, ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದುನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದು, ಅನಂತ್‌ ನಾಗ್‌, ಡಾ. ರಾಜ್‌ ಕುಮಾರ್‌ ಸೇರಿದಂತೆ ಅನೇಕ ದಿಗ್ಗಜ ನಟರೊಂದಿಗೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಖ್ಯಾತಿ ಇವರದ್ದು.

ಮಿಂಚಿನ ಓಟ, ಬಾಡದ ಹೂವು, ಆಕಸ್ಮಿಕ, ಅಗ್ನಿ ಐಪಿಎಸ್‌, ದೀಪಾವಳಿ, ಅಯ್ಯ, ಅಪೂರ್ವ ಸಂಗಮ, ಪ್ರೀತ್ಸೋದ್‌ ತಪ್ಪಾ, ಏಳು ಸುತ್ತಿನ ಕೋಟೆ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಮನ್‌ ದೀಪ್‌ ರಾಯ್‌ ನಟಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದಲೂ ಸಿನಿಪ್ರಿಯರನ್ನು ನಟನೆಯ ಮೂಲಕ ರಂಜಿಸುತ್ತಾ ಬಂದಿದ್ದಾರೆ.

ಮನ್‌ ದೀಪ್‌ ರಾಯ್‌ ತಮ್ಮ ಹಾಸ್ಯ ಪಾತ್ರಗಳ ಮೂಲಕ, ತಮ್ಮ ನಟನೆಯ ಮೂಲಕ ಕನ್ನಡ ಸಿನಿ ಪ್ರೇಮಿಗಳನ್ನು ಸೆಳೆದಿದ್ದಾರೆ. ಆದರೆ ಇಂದು ಹೃದಯಾಘಾತದಿಂದ ಮನ್‌ ದೀಪ್‌ ರಾಯ್‌ ನಿಧನ ಹೊಂದಿದ್ದು, ಳಿಗ್ಗೆ 12 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ನ ಊರ್ಫಿಯಾದ ನಿವೇದಿತಾ : ಬಾರ್ಬಿ ಸುಂದರಿಯ ವೀಡಿಯೋ ವೈರಲ್

ಇದನ್ನೂ ಓದಿ : “ಕ್ರಾಂತಿ” ಬೆನ್ನಲ್ಲೇ ಸೆಟ್ಟೇರುತ್ತಾ ನಟ ದರ್ಶನ್‌ “ವೀರ ಮದಕರಿ ನಾಯಕ” ಸಿನಿಮಾ 

ಇದನ್ನೂ ಓದಿ : Saptami Gowda : ವಾರಿಯರ್ ಲುಕ್ ನಲ್ಲಿ ಮಿಂಚಿದ ಲೀಲಾ : ಸಪ್ತಮಿ ಗೌಡ ಹೊಸ ಪೋಟೋಸ್ ವೈರಲ್

ಇವರ ನಿಧನಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರು ಸಂತಾಪವನ್ನು ಸೂಚಿಸಿದ್ದು, ಕನ್ನಡ ಚಿತ್ರರಂಗಕ್ಕೆ ಕಲಾವಿಧರನ್ನು ಕಳೆದುಕೊಂಡು ಅಪಾರ ನಷ್ಟನ್ನುಂಟುಮಾಡಿದೆ.

Mandeep Roy death: Veteran Kannada film actor Mandeep Roy passed away

Comments are closed.