ದೀಪಾವಳಿಗೆ ಈ 5 ವಸ್ತುಗಳನ್ನು ಖಂಡಿತ ಖರೀದಿಸಿ: ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿಯೇ ಸದಾ ನೆಲೆಸುತ್ತಾಳೆ

Deepavali Vastu Tips: ವರ್ಷದ ಅತಿ ದೊಡ್ಡ ಹಬ್ಬ ದೀಪಾವಳಿಗೆ ಕೆಲವೇ ದಿನಗಳಿವೆ. ಬೆಳಕಿನ ಈ ಹಬ್ಬ ಪ್ರತಿ ಮನೆಯಲ್ಲೂ ಸಂಭ್ರಮ, ಸಡಗರ ತರುತ್ತದೆ. ಈ ವರ್ಷ ದೀಪಾವಳಿಯು ಅಕ್ಟೋಬರ್ 20 ರಿಂದ ಪ್ರಾರಂಭವಾಗುತ್ತದೆ.

ಈ ಹಬ್ಬದಲ್ಲಿ ಅಮಾವಾಸ್ಯೆಯಂದು ಲಕ್ಷ್ಮಿ ದೇವಿ ಮತ್ತು ಗಣೇಶನನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ದೀಪಾವಳಿಗಾಗಿ ವಾರದ ಮೊದಲೇ ಖರೀದಿ ಶುರುವಾಗುತ್ತದೆ.

ಹೊಸ ವಾಹನ, ಆಭರಣ, ಗೃಹೋಪಯೋಗಿ ವಸ್ತುಗಳು, ಹೊಸ ಬಟ್ಟೆ, ಪೂಜೆ ಸಾಮಗ್ರಿಗಳು, ಉಡುಗೊರೆ ಹೀಗೆ ಖರೀದಿ ಜೋರಾಗಿಯೇ ಇರುತ್ತದೆ. ಆದರೆ ಇವುಗಳ ಹೊರತಾಗಿಯೂ ದೀಪಾವಳಿಯಂದು ಕೆಲವು ವಸ್ತುಗಳನ್ನು ಖರೀದಿಸುವುದು ಅತ್ಯಂತ ಶುಭವೆಂದು ವಾಸ್ತು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ.

ದೀಪಾವಳಿಯಂದು ಈ ಐದು ವಸ್ತುಗಳನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿಯು ಸಂತೋಷಗೊಳ್ಳುತ್ತಾಳೆ ಮತ್ತು ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಹಾಗಾದರೆ ವಾಸ್ತು ಪ್ರಕಾರ ದೀಪಾವಳಿಯಂದು ಏನು ಖರೀದಿಸಬೇಕೆಂದು ತಿಳಿಯೋಣ.

ವಾಸ್ತು ಪ್ರಕಾರ ದೀಪಾವಳಿಗೆ ಖರೀದಿಸಬೇಕಾದ 5 ವಸ್ತುಗಳು

ಬೆಳ್ಳಿ ವಸ್ತುಗಳು

ವಾಸ್ತು ಪ್ರಕಾರ, ದೀಪಾವಳಿಯಂದು ಬೆಳ್ಳಿ ವಸ್ತುಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಬೆಳ್ಳಿ ನಾಣ್ಯಗಳು, ಪಾತ್ರೆಗಳು ಮತ್ತು ಆಭರಣಗಳನ್ನು ಖರೀದಿಸಬಹುದು.

ಹಾಗೆ ಮಾಡುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂದು ಹೇಳಲಾಗುತ್ತದೆ. ದೀಪಾವಳಿ ಪೂಜೆಯಲ್ಲಿ ಬೆಳ್ಳಿ ನಾಣ್ಯವನ್ನು ಇಟ್ಟು ಪೂಜಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.

ದೀಪಗಳು

ದೀಪಾವಳಿ ಬೆಳಕಿನ ಹಬ್ಬ. ಈ ದಿನ ಸಂಜೆ ಹಣತೆಯ ದೀಪಗಳನ್ನು ಬೆಳಗಿಸುವುದು ಸಾಂಪ್ರದಾಯ. ಮಣ್ಣಿನ ದೀಪಗಳನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿಯನ್ನೇ ಮನೆಗೆ ಆಹ್ವಾನಿಸಿದಂತೆ.

ಇನ್ನು ಆ ಹಣತೆಯಲ್ಲಿ ದೀಪವನ್ನು ಬೆಳಗಿಸಿದಾಗ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಜೀವನದಲ್ಲಿ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: ನೀವು ಮಾಡುವ ಈ ತಪ್ಪುಗಳಿಂದ ಮನೆಯಲ್ಲಿ ರಾಹು ವಾಸ ಹೆಚ್ಚುತ್ತದೆ

ಪೊರಕೆ

ವಾಸ್ತು ಪ್ರಕಾರ, ದೀಪಾವಳಿಯಂದು ಪೊರಕೆ ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ದೀಪಾವಳಿಯಂದು ಪೊರಕೆ ಖರೀದಿ ಮಾಡುವುದರಿಂದ ಮನೆಯಿಂದ ಬಡತನ ದೂರವಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಗೋಮತಿ ಚಕ್ರ

ವಾಸ್ತು ಪ್ರಕಾರ, ದೀಪಾವಳಿಯಂದು ಗೋಮತಿ ಚಕ್ರವನ್ನು ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಗೋಮತಿ ಚಕ್ರವನ್ನು ಇಟ್ಟುಕೊಳ್ಳುವುದರಿಂದ ದುಷ್ಟ ಕಣ್ಣಿನಿಂದ ದೂರವಿರಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಗೋಮತಿ ಚಕ್ರವನ್ನು ಯಶಸ್ಸು ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಲಕ್ಷ್ಮಿ-ಗಣೇಶ ವಿಗ್ರಹಗಳು

ವಾಸ್ತು ಪ್ರಕಾರ, ದೀಪಾವಳಿಯಂದು ಲಕ್ಷ್ಮಿ-ಗಣೇಶ ವಿಗ್ರಹಗಳು ಅಥವಾ ಫೋಟೋಗಳನ್ನು ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯ ಸಂಜೆ ಪ್ರದೋಷ ಸಮಯದಲ್ಲಿ ಲಕ್ಷ್ಮಿ ದೇವತೆ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ.

ಇದನ್ನೂ ಓದಿ: ಕರ್ಪೂರದಲ್ಲಿದೆ ವಾಸ್ತು ದೋಷಕ್ಕೆ ಪರಿಹಾರ

(Deepavali Vastu Tips 5 things you should buy in this diwali to get Goddess Lakshmi blessings)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories