ಗುರುವಾರ, ಜೂನ್ 12, 2025
Homekarnatakaಗೃಹಜ್ಯೋತಿ ಗ್ರಾಹಕರಿಗೆ ಸರಕಾರದ ವಂಚನೆ : ಮೆಸ್ಕಾಂ ಉದ್ಯೋಗಿಗಳ ಪಿಎಫ್‌ + ಗ್ರಾಚ್ಯುಟಿಗೆ ಗ್ರಾಹಕರ ಹಣ

ಗೃಹಜ್ಯೋತಿ ಗ್ರಾಹಕರಿಗೆ ಸರಕಾರದ ವಂಚನೆ : ಮೆಸ್ಕಾಂ ಉದ್ಯೋಗಿಗಳ ಪಿಎಫ್‌ + ಗ್ರಾಚ್ಯುಟಿಗೆ ಗ್ರಾಹಕರ ಹಣ

ಮೆಸ್ಕಾಂ ತನ್ನ ಉದ್ಯೋಗಿಗಳಿಗೆ ಪಿಎಫ್‌ (PF) + ಗ್ರ್ಯಾಚುಟಿ (gratuity) ಯನ್ನು ನೀಡಲು ಗ್ರಾಹಕರಿಂದ ಪ್ರತೀ ತಿಂಗಳು ಹಣವನ್ನು ಸಂಗ್ರಹ ಮಾಡುತ್ತಿದೆ. ಮುಂದೆ ತನ್ನ ಸಿಬ್ಬಂದಿಗಳ ವೇತನವನ್ನೂ ಕೂಡ ಗ್ರಾಹಕರಿಂದಲೇ ವಸೂಲಿ ಮಾಡಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Gruha Jyothi fraud : ಉಡುಪಿ : ಗೃಹಜ್ಯೋತಿ ಯೋಜನೆಯ ಮೂಲಕ ಗ್ರಾಹಕರಿಗೆ ಉಚಿತ ವಿದ್ಯುತ್‌ ನೀಡುವುದಾಗಿ ಸರಕಾರ ಹೇಳಿಕೊಂಡಿದೆ. ಆದ್ರೀಗ ಗೃಹಜ್ಯೋತಿ (Gruha Jyothi Scheme) ಬಳಕೆದಾರರಿಗೂ ದುಪ್ಪಟ್ಟು ಶುಲ್ಕ ಬರುತ್ತಿದ್ದು, ಗ್ರಹಜ್ಯೋತಿ ಗ್ರಾಹಕರಿಗೆ ಸರಕಾರ ವಂಚಿಸುತ್ತಿದೆ. ಮೆಸ್ಕಾಂ ತನ್ನ ಉದ್ಯೋಗಿಗಳ ಫಿಎಫ್‌ ಮತ್ತು ಗ್ರಾಚ್ಯುಟಿಗಾಗಿ ಗ್ರಾಹಕರ ಹಣ ಬಳಕೆ ಮಾಡುತ್ತಿರೋದು ಬಯಲಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಜಾರಿಗೆ ಬರುತ್ತಲೇ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿತ್ತು. ನಂತರದಲ್ಲಿ 200 ಯೂನಿಟ್‌ ವರೆಗೆ ಉಚಿತ ಎಂದಿತ್ತು. ವಿದ್ಯುತ್‌ ಶುಲ್ಕ ಸಂಪೂರ್ಣವಾಗಿ ಉಚಿತವಾಗಿ ಇರುತ್ತದೆ ಎಂದು ಭಾವಿಸಿದ್ದ ಗ್ರಾಹಕರಿಗೆ ಸರಕಾರ ಶಾಕ್‌ ಕೊಟ್ಟಿದ್ದು, ಪ್ರತೀ ತಿಂಗಳು ನೂರಾರು ರೂಪಾಯಿ ವಿದ್ಯುತ್‌ ಬಿಲ್‌ ಪಾವತಿ ಮಾಡಬೇಕಾಗಿದೆ.

ಮೆಸ್ಕಾಂ ತನ್ನ ಉದ್ಯೋಗಿಗಳಿಗೆ ಪಿಎಫ್‌ (PF) + ಗ್ರ್ಯಾಚುಟಿ (gratuity) ಯನ್ನು ನೀಡಲು ಗ್ರಾಹಕರಿಂದ ಪ್ರತೀ ತಿಂಗಳು ಹಣವನ್ನು ಸಂಗ್ರಹ ಮಾಡುತ್ತಿದೆ. ಮುಂದೆ ತನ್ನ ಸಿಬ್ಬಂದಿಗಳ ವೇತನವನ್ನೂ ಕೂಡ ಗ್ರಾಹಕರಿಂದಲೇ ವಸೂಲಿ ಮಾಡಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರಕಾರದ ಆದೇಶದ ಮೇರೆಗೆ ಮೆಸ್ಕಾಂ ನಡೆಸುತ್ತಿರುವ ಇಂತಹ ದೌರ್ಜನ್ಯವನ್ನು ಎಲ್ಲರೂ ಪ್ರತಿಭಟಿಸಬೇಕು ಎನ್ನುತ್ತಿದ್ದಾರೆ.

Karnataka Government fraud on Gruha Jyothi customers money goes towards PF and gratuity of Mescom employees Kannada News

Also Read : Ration Card ekyc : ಜೂನ್‌ 30 ಕೊನೆಯ ದಿನ : ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್‌ ಕಾರ್ಡ್‌

Gruha Jyothi fraud : ಸರಕಾರದ ವಿರುದ್ದ ಗ್ರಾಹಕರ ಆಕ್ರೋಶ

ಸರಕಾರ ಹಾಗೂ ಮೆಸ್ಕಾಂ ವಿರುದ್ದ ಗ್ರಾಹಕ ನ್ಯಾಯಾಲಯ, ಕಾನೂನು ನ್ಯಾಯಾಲಯದಲ್ಲಿ ಗ್ರಾಹಕರನ್ನು ವಂಚಿಸಿರೋ ಕಾರಣಕ್ಕೆ ವಿದ್ಯುತ್‌ ಸರಬರಾಜು ಕಂಪೆನಿ, ಕೆಇಎಸ್‌ ನಿತಂತ್ರಣ ಮಂಡಳಿಯ ಜೊತೆಗೆ ರಾಜ್ಯದ ಕಾಂಗ್ರೆಸ್‌ ಸರಕಾರದ ವಿರುದ್ದ ಪ್ರಕರಣ ದಾಖಲಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕರ್ನಾಟಕದ ಕಾಂಗ್ರೆಸ್‌ ಸರಕಾರ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದ ಬೆನ್ನಲ್ಲೇ ವಿದ್ಯುತ್‌ ದರ ಏರಿಕೆ ಮಾಡಿತ್ತು. ಇದರಿಂದಾಗಿ ಸಣ್ಣ, ಮಧ್ಯಮ ಕೈಗಾರಿಕೆಗಳು, ಮದ್ಯಮ ವರ್ಗದ ಜನರು ಕೂಡ ವಿದ್ಯುತ್‌ ಹೊರೆ ಅನುಭವಿಸಿದ್ದರು. ಇದೀಗ ಮೆಸ್ಕಾಂ ತನ್ನ ನೌಕರರಿಗೆ ನೀಡುವ ಸೌಲಭ್ಯವನ್ನೂ ಗ್ರಾಹಕರಿಂದಲೇ ವಸೂಲಿ ಮಾಡ್ತಾ ಇರೋದು ಮಾತ್ರ ವಿಪರ್ಯಾಸ. ಸರಕಾರ ವಿರುದ್ದ ಜನರು ಧ್ವನಿ ಎತ್ತದೇ ಇದ್ರೆ ಮುಂದೆ ಸರಕಾರ ದುಪ್ಪಟ್ಟು ವಸೂಲಿ ನಡೆಸಲಿದೆ ಎನ್ನುತ್ತಿದ್ದಾರೆ ಜನರು. ನೀವು ಕೂಡ ನಿಮ್ಮ ಮನೆಯ ವಿದ್ಯುತ್‌ ಬಿಲ್‌ ಒಮ್ಮೆ ಪರಿಶೀಲಿಸಿಕೊಳ್ಳಿ.

Also Read : Lakhpati Didi Yojana : ಬಡ್ಡಿಯಿಲ್ಲದೇ ಮಹಿಳೆಯರಿಗೆ 5 ಲಕ್ಷ ರೂ ಸಾಲ : ಕೇಂದ್ರ ಸರಕಾರದ ಹೊಸ ಯೋಜನೆ ಜಾರಿ

Government fraud on Gruha Jyothi customers: Customers money goes towards PF and gratuity of Mescom employees Kannada News

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular