ಧರ್ಮಸ್ಥಳ ಬುರುಡೆ ಪ್ರಕರಣ : ಕೊನೆಗೂ ಶಿವಮೊಗ್ಗ ಜೈಲಿನಿಂದ ಹೊರಬಂದ ಚಿನ್ನಯ್ಯ..!

ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ರೂವಾರಿ ಮಾಜಿ ಮಾಸ್ಕ್​ ಮ್ಯಾನ್​ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಹೊರಬರುವ ಭಾಗ್ಯ ಒದಗಿಬಂದಿದೆ. ಜಾಮೀನಿಗೆ 1 ಲಕ್ಷ ರೂಪಾಯಿ ಷರತ್ತು ಪೂರೈಸಿ ದಾಖಲೆ ನೀಡಿದ ಚಿನ್ನಯ್ಯ ಕಡೆಯವರು ಚಿನ್ನಯ್ಯರನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜೈಲಿಗೆ ಬಂದಿದ್ದ ಪತ್ನಿ ಮಲ್ಲಿಕಾ ಹಾಗೂ ಸಹೋದರಿ ರತ್ನಾ ಮತ್ತು ವಕೀಲರ ಜೊತೆಯಲ್ಲಿ ಚಿನ್ನಯ್ಯ ಜೈಲಿನಿಂದ ಹೊರ ನಡೆದಿದ್ದಾರೆ.

ಅಂದಹಾಗೆ ಈ ಪ್ರಕರಣದಲ್ಲಿ ಚಿನ್ನಯ್ಯಗೆ ಎಂದೋ ಜಾಮೀನು ದೊರಕಿತ್ತು. ಆದರೆ 1 ಲಕ್ಷ ರೂಪಾಯಿ ಬಾಂಡ್​ ಕಟ್ಟಲು ಸಾಧ್ಯವಾಗದೇ ಚಿನ್ನಯ್ಯ ಪರಿತಪಿಸುತ್ತಿದ್ದ ಎನ್ನಲಾಗಿದೆ. ನಿನ್ನೆ ಸಂಜೆ ಸುಮಾರಿಗೆ 1 ಲಕ್ಷ ರೂಪಾಯಿ ಷರತ್ತು ಬದ್ಧ ಜಾಮೀನು ಪ್ರಕ್ರಿಯೆ ಪೂರೈಕೆ ಮಾಡಲಾಗಿದೆ. ಹೀಗಾಗಿ ಚಿನ್ನಯ್ಯಗೆ ಬಿಡುಗಡೆಯ ಭಾಗ್ಯ ಒದಗಿ ಬಂದಿದೆ.

ಇಷ್ಟು ದಿನಗಳ ಕಾಲ ಜಾಮೀನು ದೊರಕಿದ್ದರೂ ಬುರುಡೆ ಚಿನ್ನಯ್ಯ ಜೈಲಿನಲ್ಲಿಯೇ ಉಳಿದಿದ್ದರು. ಸೆಪ್ಟೆಂಬರ್​ 9ರಂದು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಚಿನ್ನಯ್ಯರನ್ನು ಶಿಫ್ಟ್​ ಮಾಡಲಾಗಿತ್ತು. ಕಾವೇರಿ ಬ್ಯಾರಕ್​ನಲ್ಲಿ ಚಿನ್ನಯ್ಯನನ್ನು ಇರಿಸಲಾಗಿತ್ತು. ಧರ್ಮಸ್ಥಳ ಕ್ಷೇತ್ರಕ್ಕೆ ಅಪಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ವಿಚಾರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.ಬೆಳ್ತಂಗಡಿ ಜೆಎಂಎಫ್​ಸಿ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಳ್ತಂಗಡಿಯಿಂದ ಶಿವಮೊಗ್ಗ ಜೈಲಿಗೆ ಆರೋಪಿ ಚಿನ್ನಯ್ಯನನ್ನು ಶಿಫ್ಟ್​ ಮಾಡಲಾಗಿತ್ತು.

ಇದನ್ನೂ ಓದಿ: ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೊಮ್ಮೆಗಡಿಪಾರು ಸಂಕಷ್ಟ!

ಜೈಲಿನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಚಿನ್ನಯ್ಯ ಹಾಗೂ ಪತ್ನಿ ಮಲ್ಲಿಕಾ ನಿರಾಕರಿಸಿದ್ದಾರೆ. ಕಾರಿನಲ್ಲಿ ಕುಳಿತ ಚಿನ್ನಯ್ಯ ಗ್ಲಾಸು ಏರಿಸಿಕೊಂಡು ಸೀದಾ ತೆರಳಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories