Boy dies by witchcraft : ಬಾಲಕನನ್ನು ನರಬಲಿ ಕೊಟ್ಟ ಪಾಪಿಗಳು : ಕುಟುಂಬದಿಂದಲೇ ಕೃತ್ಯ

ಲಕ್ನೋ : (Boy dies by witchcraft) ಮೂಡನಂಬಿಕೆಗೆ ಹತ್ತು ವರ್ಷದ ಬಾಲಕ ಬಲಿಯಾದ ಆಘಾತಕಾರಿ ಘಟನೆ ಲಕ್ನೋದಲ್ಲಿ ನಡೆದಿದೆ. ಕುಟುಂಬದವರೇ ಬಾಲಕನನ್ನು ಕತ್ತು ಸೀಳಿ ನರಬಲಿ ನೀಡಿದ್ದು, ಬಾಲಕನನ್ನು ನರಬಲಿ ನೀಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿವೇಕ್‌ ಎನ್ನುವಾತ ನರಬಲಿಗೆ ಬಲಿಯಾದ ಬಾಲಕ.

ಲಕ್ನೋದ ಪಾರ್ಸಾ ಗ್ರಾಮದ ನಿವಾಸಿ ಕೃಷ್ಣ ವರ್ಮಾ ಅವರ ಪುತ್ರ ವಿವೇಕ್‌ ಗುರುವಾರ ನಾಪತ್ತೆಯಾಗಿದ್ದು, ಬಾಲಕನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಹುಡುಕಾಟ ನಡೆಸಿದ ವೇಳೆಯಲ್ಲಿ ಅದೇ ದಿನ ಕತ್ತು ಸೀಳಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದು, ತನಿಖೆಯ ವೇಳೆ ಬಾಲಕನ ಕುಟುಂಬದವನೇ ಆದ ಅನೂಪ್‌ ಎನ್ನುವಾತನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅನೂಪ್‌ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಎರಡು ವರ್ಷದ ಮಗುವಿದೆ ಎನ್ನಲಾಗಿದೆ. ಮಾನಸಿಕ ಅಸ್ವಸ್ಥನಾಗಿದ್ದ ಆತನಿಗೆ ಯಾವುದೇ ಚಿಕಿತ್ಸೆಗಳು ಫಲಿತಾಂಶ ನೀಡದೇ ಇದ್ದಾಗ ಆತ ವಾಮಾಚಾರದ ಮೊರೆ ಹೋಗಿದ್ದು, ವ್ಯಕ್ತಿಯೊಬ್ಬ ನರಬಲಿ ನೀಡುವಂತೆ ಅನೂಪ್‌ ಗೆ ತಿಳಿಸಿದ್ದರು. ಯಾವುದೋ ವ್ಯಕ್ತಿಯ ಮಾತನ್ನು ನಂಬಿದ ಅನೂಪ್‌ ಮೃತ ಬಾಲಕ ವಿವೇಕ್‌ ನ ಚಿಕ್ಕಪ್ಪನ ಜೊತೆ ಸೇರಿ ಬಾಲಕನಿಗೆ ಗುದ್ದಲಿಯಿಂದ ಹೊಡೆದು ಕೊಲೆಗೈದಿದ್ದಾರೆ.

ವಿಚಾರಣೆ ವೇಳೆ ಅನೂಪ್‌ ಸತ್ಯವನ್ನು ಬಿಚ್ಚಿಟ್ಟಿದ್ದು, ಮಾಹಿತಿ ಆಧಾರದ ಮೇಲೆ ಪೊಲೀಸರು ಆರೋಪಿಗಳಾದ ಅನೂಪ್‌, ಬಾಲಕನ ಚಿಕ್ಕಪ್ಪ ಚಿಂತಾರಾಮ್‌, ಹಾಗೂ ನರಬಲಿ ನೀಡಲು ಸಲಹೆ ನೀಡಿದಾತನನ್ನು ಬಂಧಿಸಿದ್ದಾರೆ. ಇದೀಗ ಆರೋಪಿಗಳ ವಿರುದ್ದ ಸಂಬಂಧಿತ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : 15 month old child died: ಪತಿ – ಪತ್ನಿಯ ಜಗಳಕ್ಕೆ 15 ತಿಂಗಳ ಕಂದಮ್ಮ ಬಲಿ

ಇದನ್ನೂ ಓದಿ : Fire accident-couple died: ಹೊತ್ತಿ ಉರಿದ ಮನೆ ಮತ್ತು ಬಟ್ಟೆ ಅಂಗಡಿ : ದಂಪತಿ ಸಜೀವ ದಹನ

ಇದನ್ನೂ ಓದಿ : Man died in police custody: ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು : ಸಬ್ ಇನ್ಸ್ ಪೆಕ್ಟರ್ ಅಮಾನತು

Boy dies by witchcraft : Sinners who sacrificed a boy : Act by the family itself

Comments are closed.